‘ಸಂಸ್ಥೆ ಆವರಣದಲ್ಲಿ ಕೆಲವೊಂದು ಅನಧಿಕೃತ ಆಂಬುಲೆನ್ಸ್, ಶವ ಸಾಗಣೆ ವಾಹನಗಳು ಹಾಗೂ ಆಟೊರಿಕ್ಷಾಗಳು ಪ್ರವೇಶಿಸುತ್ತಿವೆ. ಅವುಗಳಲ್ಲಿ ಬರುವವರು ಹೊರರೋಗಿಗಳ ವಿಭಾಗ, ತುರ್ತು ಚಿಕಿತ್ಸಾ ವಿಭಾಗ ಹಾಗೂ ಶವಾಗಾರದ ಬಳಿ ಗೊಂದಲ ಸೃಷ್ಟಿಸುತ್ತಿದ್ದು, ಇದರಿಂದ ಸಾರ್ವಜನಿಕರಲ್ಲಿ ತಪ್ಪು ತಿಳಿವಳಿಕೆ ಆಗುತ್ತಿದೆ. ಮೃತದೇಹ ಸಾಗಿಸಲು ಹೆಚ್ಚುವರಿ ಮೊತ್ತ ಪಡೆಯುತ್ತಿರುವ ಕುರಿತು ಸಾಕಷ್ಟು ದೂರುಗಳು ದಾಖಲಾಗಿವೆ. ಇದರಲ್ಲಿ ಸಂಸ್ಥೆಯ ಸಿಬ್ಬಂದಿಯೇ ಭಾಗಿಯಾಗಿದ್ದಾರೆ ಎಂಬ ತಪ್ಪು ಅಭಿಪ್ರಾಯ ಜನರಲ್ಲಿ ಮೂಡಿದೆ. ಇಂತಹ ವಿಷಯಗಳಲ್ಲಿ ಸಿಬ್ಬಂದಿ ಒಳಗೊಂಡಿಲ್ಲ’ ಎಂದು ಸ್ಪಷನೆ ನೀಡಿದ್ದಾರೆ.