ಬಿಕಾಂ ಅಂತಿಮ ವರ್ಷದ ಶಿವಲಿಂಗ ಗಾಣದಾರ, ಮೃತ್ಯುಂಜಯ ಮಠದ, ಚೇತನ ಸನದಿ, ದಯಾನಂದ ಗೌರಿ ಮತ್ತು ರೇಂಜರ್ಸ್ಗಳಾದ ಲಕ್ಷ್ಮಿಶ್ರೀ ಇರಾಗಾರ, ಸವಿತಾ ಪಾಟೀಲ, ಬಸವ್ವ ಕಿಚಡಿ ಮತ್ತು ಕಾವೇರಿ ಕುಡಜೋಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸಿದ್ದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹೆಚ್ಚುವರಿ ಮುಖ್ಯ ಆಯುಕ್ತ ಎಂ.ಎ. ಖಾಲೀದ್, ಕರ್ನಾಟಕ ಸಂಸ್ಥೆಯ ಉಪಾಧ್ಯಕ್ಷ ಎಸ್.ಸುರೇಶ್ಕುಮಾರ್, ರಾಜ್ಯದ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಭಾಗವಹಿಸಿದ್ದರು.