ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಗ ಗುಡಗನಟ್ಟಿ ಮಾತನಾಡಿ, ‘ಪ್ರತಿಮೆ ವಿವಾದ ಬೇರೆ ದಾರಿಯಲ್ಲಿ ಸಾಗುತ್ತಿತ್ತು ಹಾಗೂ ರಾಜಕೀಯ ಸೇರಿಕೊಳ್ಳುತ್ತಿತ್ತು. ಹೀಗಾಗಿ ಕರವೇ, ರಾಯಣ್ಣನ ಅಭಿಮಾನಿಗಳು, ಸ್ಥಳೀಯರು ಹಾಗೂ ಕರವೇಯವರು ಸೇರಿ ಪ್ರತಿಮೆ ಸ್ಥಾಪನೆ ಮಾಡಿದ್ದೇವೆ. ಇದರೊಂದಿಗೆ ವಿವಾದ ಬಗೆಹರಿದಿದೆ. ರಾಜ್ಯದಾದ್ಯಂತ ರಾಯಣ್ಣನ ಅಭಿಮಾನಿಗಳು ಹಾಗೂ ಕರವೇ ಕಾರ್ಯಕರ್ತರು ವಿಜಯೋತ್ಸವ ಆಚರಿಸಬೇಕು’ಎಂದು ಹೇಳಿದರು.