‘ಈಗಲೂ ನಾನು ಮುಸ್ಲಿಮರು, ಹಿಂದೂಗಳು ಮತ್ತು ಶೋಷಿತರ ಪರವಾಗಿಯೇ ಇದ್ದೇನೆ. ಆದರೆ, ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವವರ ಜೊತೆ ಇಲ್ಲ. ಬಿಜೆಪಿ ಮುಸ್ಲಿಂ ವಿರೋಧಿಯಲ್ಲ. ನಮ್ಮಲ್ಲಿದ್ದುಕೊಂಡು ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವವರನ್ನು ಗಡಿಪಾರು ಮಾಡಬೇಕು ಎನ್ನುವವರನ್ನು ಸಮರ್ಥಿಸಿಕೊಳ್ಳುತ್ತೇನೆ. ಕಾಲೇಜು ಚುನಾವಣೆಯಲ್ಲಿ ಬೋರ್ಡ್ ಬರೆಯುವ ಕೆಲಸಕ್ಕೆ ಸತೀಶನನ್ನು ಹಚ್ಚಿದ್ದೆ. ಇಲ್ಲವೆಂದು ಹೇಳಲಿ ತಕ್ಷಣ ರಾಜೀನಾಮೆ ಕೊಡುತ್ತೇನೆ’ ಎಂದು ಸವಾಲು ಹಾಕಿದರು. ‘ಅವನೇನು ದೊಡ್ಡ ನಾಯಕನಾ?’ ಎಂದು ಟೀಕಿಸಿದರು.