‘ನಾನು ಜನಸಂಘದವನು. ಕರಿ ಟೋಪಿ, ಖಾಕಿ ಬಣ್ಣದ ಹಾಫ್ ಪ್ಯಾಂಟ್ ಹಾಕಿಕೊಳ್ಳುತ್ತಿದ್ದೆ’ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ಇಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಸತೀಶ, ‘ನಮ್ಮ ತಂದೆ ಅವರ ಸ್ನೇಹಿತ ಪತ್ರಾವಳಿ ಎನ್ನುವವರು ಆರ್ಎಸ್ಎಸ್ನಲ್ಲಿದ್ದರು. ತಂದೆ, ವೈಯಕ್ತಿಕ ಬಾಂಧವ್ಯದಿಂದ ಅವರ ಬಳಿ ಹೋಗಿ ಕೂರುತ್ತಿದ್ದರು. ಅದನ್ನೇ ರಮೇಶ ಆರ್ಎಸ್ಎಸ್ ಎಂದು ಬಿಂಬಿಸುತ್ತಿದ್ದಾರೆ. 30 ವರ್ಷಗಳಲ್ಲಿ ರಮೇಶ ಆರ್ಎಸ್ಎಸ್ ಮೂಲದ ಬಗ್ಗೆ ಹೇಳಿರಲೇ ಇಲ್ಲ. ಈಗ ಹೇಳಿಕೆ ಕೊಟ್ಟಿರುವುದು ಆಶ್ಚರ್ಯ ತಂದಿದೆ’ ಎಂದು ತಿಳಿಸಿದರು.