ಸವದತ್ತಿ: ಸವದತ್ತಿ-ಧಾರವಾಡ ರಸ್ತೆಯ ಇನಾಮಹೊಂಗಲದ ಬಳಿ ತುಪರಿಹಳ್ಳಕ್ಕೆ ನಿರ್ಮಿಸಿದ್ದ ಪರ್ಯಾಯ ರಸ್ತೆ ಕೊಚ್ಚಿ ಹೋಗುವ ಸ್ಥಿತಿಯಲ್ಲಿದೆ.
ಕಳೆದ ತಿಂಗಳು ಸುರಿದಿದ್ದ ಮಳೆಗೆ ಇನಾಮಹೊಂಗಲದ ಸೇತುವೆ ಮುರಿದಿತ್ತು. ಸೇತುವೆ ಕೆಳಗೆ ಸಂಚಾರಕ್ಕಾಗಿ ಪರ್ಯಾಯ ರಸ್ತೆ ನಿರ್ಮಿಸಲಾಗಿತ್ತು. ಈಗ ಅದೂ ತುಪ್ಪರಿಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದೆಎಂದುಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತುಪ್ಪರಿಹಳ್ಳದ ಹರಿವು ಹೆಚ್ಚಾಗಿದ್ದು, ಸದ್ಯ ಸಂಚಾರ ಸ್ಥಗಿತಗೊಂಡಿದೆ. ಲೋಕೋಪಯೋಗಿ ಇಲಾಖೆ ಎಂಜಿನಿಯರ್ಎಚ್.ಎ ಕದ್ರಾಪೂರ ಪ್ರತಿಕ್ರಿಯಿಸಿ, ನೀರಿನ ಹರಿವು ಹೆಚ್ಚಿರುವುದರಿಂದ ಪರ್ಯಾಯ ರಸ್ತೆ ತಡೆಯುವ ಲಕ್ಷಣಗಳಿಲ್ಲ ಎಂದರು.
ಸೇತುವೆ ದುರಸ್ತಿಗೆ ₹3.5 ಕೋಟಿ ಅಗತ್ಯವಿದೆ. ಅನುದಾನ ಮಂಜೂರಾದ ಬಳಿಕ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.