ಬೆಳಗಾವಿ: ನಗರದಲ್ಲಿ ಶಿವಾಜಿ ಜಯಂತಿ ಅಂಗವಾಗಿ ಶನಿವಾರ ರಾತ್ರಿ ನಡೆಯುತ್ತಿರುವ ಮೆರವಣಿಗೆಯಲ್ಲಿ ವಿವಿಧ ಮಂಡಳಗಳು ಶಿವಾಜಿ ಮಹಾರಾಜರ ಇತಿಹಾಸ ಸಾರುವ ಕಿರು ನಾಟಕಗಳನ್ನು ಪ್ರದರ್ಶಿಸಿದವು.
ಯುವಕ-ಯುವತಿಯರು ಕೇಸರಿ ಬಾವುಟಗಳನ್ನು ಹಿಡಿದು, ಕುಣಿದು ಕುಪ್ಪಳಿಸಿದರು.
ಮಳೆ ತಗ್ಗಿದ್ದರಿಂದ ಮೆರವಣಿಗೆ ವೀಕ್ಷಣೆಗೆ ಜನರು ಆಗಮಿಸುತ್ತಿದ್ದಾರೆ.
ನರಗುಂದಕರ ಭಾವೆ ಚೌಕ್ ನಿಂದ ಹೊರಟಿರುವ ಮೆರವಣಿಗೆ ವಿವಿಧ ಮಾರ್ಗಗಳಲ್ಲಿ ಸಾಗಿ, ಭಾನುವಾರ ಬೆಳಿಗ್ಗೆ ಕಪಿಲೇಶ್ವರ ದೇವಸ್ಥಾನದ ಅಂಗಳ ತಲುಪಲಿದೆ.