<p><strong>ಬೆಳಗಾವಿ:</strong> ‘ಪ್ರವಾಹವಿದ್ದಾಗ ಅಥವಾ ರಸ್ತೆಯಲ್ಲಿ ಹೋಗಲಾಗದಂತಹ ಸ್ಥಿತಿ ಇದ್ದರೆ ವಿಮಾನದಲ್ಲಿ ಹೋಗಲಿ. ಆದರೆ, ಈಗ ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ಮಾಡಿ ಮೇಲೆ ಸುತ್ತಾಡಿದರೆ ಜನರ ಕಷ್ಟ ಗೊತ್ತಾಗುತ್ತದೆಯೇ?’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕೇಳಿದರು.</p>.<p>ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.</p>.<p>‘ಹೋದ ವರ್ಷ ಆಗಸ್ಟ್, ಈ ವರ್ಷ ಆಗಸ್ಟ್ನಿಂದ ಈವರೆಗೂ ಆಗಾಗ ಪ್ರವಾಹ ಉಂಟಾಗಿದೆ. ಪ್ರಧಾನಿ ಒಮ್ಮೆಯಾದರೂ ಕರ್ನಾಟಕಕ್ಕೆ ಬಂದರೇ? 2009ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಪ್ರವಾಹ ಬಂದಿತ್ತು. ಆಗ, ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಸಮೀಕ್ಷೆ ಮಾಡಿದ್ದರು. ಆಗ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೆರೆ ಬಂದಿರಲಿಲ್ಲ. ₹1 ಸಾವಿರ ಕೋಟಿಯನ್ನು ಆ ಪ್ರಧಾನಿ ಘೋಷಿಸಿದ್ದರು. ಈಗಿನ ಪ್ರಧಾನಿ ಏನು ಮಾಡುತ್ತಿದ್ದಾರೆ?’ ಎಂದು ಕೇಳಿದರು.</p>.<p>‘ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಬಂದರು, ಹೋದರು. ಹಣ ಕೊಟ್ಟಿದ್ದಾರಾ? ₹35 ಸಾವಿರ ಕೋಟಿ ಕೇಳಿದರೆ ಅವರು ಕೊಟ್ಟಿರುವುದು ₹ 1,652 ಕೋಟಿ ಮಾತ್ರ. ಅದಾದ ನಂತರ ಒಂದು ಪೈಸೆಯನ್ನೂ ಕೊಟ್ಟಿಲ್ಲ. 25 ಸಂಸದರನ್ನು ಕಳುಹಿಸಿಕೊಟ್ಟಿದ್ದರಿಂದ ಅಸಡ್ಡೆ ವಹಿಸಿದ್ದಾರೆ. ಸೋಲಿಸಿದರೆ ಅವರಿಗೆ ಬುದ್ಧಿ ಬರುತ್ತದೆ’ ಎಂದರು.</p>.<p>‘ಉಪ ಚುನಾವಣೆಯಲ್ಲಿ ಅನುಕೂಲ ಜಾಸ್ತಿ. ಸುಳ್ಳು ಹೇಳೋಕೆ, ಹಣ ಹಂಚೋಕೆ ಅವರಿಗೆ ಅವಕಾಶ ಇರುತ್ತದೆ. ಆದರೆ, ಆರ್.ಆರ್. ನಗರ ಹಾಗೂ ಶಿರಾದಲ್ಲಿ ನಾವೇ ಗೆಲ್ಲುತ್ತೇವೆ’ ಎಂದು ತಿಳಿಸಿದರು.</p>.<p>‘ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಕಡಿತಗೊಳಿಸಿದ್ದಾರೆ. ಇಂದಿರಾ ಕ್ಯಾಂಟೀನ್ಗಳಿಗೆ ಹಣ ಕೊಡುತ್ತಿಲ್ಲ. ಕೃಷಿ ಭಾಗ್ಯ, ವಿದ್ಯಾಸಿರಿ ನಿಲ್ಲಿಸಿದ್ದಾರೆ. ಎಲ್ಲ ಯೋಜನೆಯನ್ನೂ ನಿಲ್ಲಿಸಿ ‘ಸ್ವಾಹ ಭಾಗ್ಯ’ ಅವರದು’ ಎಂದು ಟೀಕಿಸಿದರು.</p>.<p><strong>ಜೆಡಿಎಸ್ ಅನ್ನು ಜನ ಮುಗಿಸುತ್ತಾರೆ:</strong> ‘ಜೆಡಿಎಸ್ನ ನಾವು ಮುಗಿಸುವುದಿಲ್ಲ. ಸೈದ್ಧಾಂತಿಕ ಗಟ್ಟಿತನ ಹಾಗೂ ನಿಲುವು ಇಲ್ಲದೆ ಹೋದರೆ ಜನರೇ ಮುಗಿಸುತ್ತಾರೆ’ ಎಂದು ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ‘ಪ್ರವಾಹವಿದ್ದಾಗ ಅಥವಾ ರಸ್ತೆಯಲ್ಲಿ ಹೋಗಲಾಗದಂತಹ ಸ್ಥಿತಿ ಇದ್ದರೆ ವಿಮಾನದಲ್ಲಿ ಹೋಗಲಿ. ಆದರೆ, ಈಗ ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ಮಾಡಿ ಮೇಲೆ ಸುತ್ತಾಡಿದರೆ ಜನರ ಕಷ್ಟ ಗೊತ್ತಾಗುತ್ತದೆಯೇ?’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕೇಳಿದರು.</p>.<p>ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.</p>.<p>‘ಹೋದ ವರ್ಷ ಆಗಸ್ಟ್, ಈ ವರ್ಷ ಆಗಸ್ಟ್ನಿಂದ ಈವರೆಗೂ ಆಗಾಗ ಪ್ರವಾಹ ಉಂಟಾಗಿದೆ. ಪ್ರಧಾನಿ ಒಮ್ಮೆಯಾದರೂ ಕರ್ನಾಟಕಕ್ಕೆ ಬಂದರೇ? 2009ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಪ್ರವಾಹ ಬಂದಿತ್ತು. ಆಗ, ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಸಮೀಕ್ಷೆ ಮಾಡಿದ್ದರು. ಆಗ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೆರೆ ಬಂದಿರಲಿಲ್ಲ. ₹1 ಸಾವಿರ ಕೋಟಿಯನ್ನು ಆ ಪ್ರಧಾನಿ ಘೋಷಿಸಿದ್ದರು. ಈಗಿನ ಪ್ರಧಾನಿ ಏನು ಮಾಡುತ್ತಿದ್ದಾರೆ?’ ಎಂದು ಕೇಳಿದರು.</p>.<p>‘ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಬಂದರು, ಹೋದರು. ಹಣ ಕೊಟ್ಟಿದ್ದಾರಾ? ₹35 ಸಾವಿರ ಕೋಟಿ ಕೇಳಿದರೆ ಅವರು ಕೊಟ್ಟಿರುವುದು ₹ 1,652 ಕೋಟಿ ಮಾತ್ರ. ಅದಾದ ನಂತರ ಒಂದು ಪೈಸೆಯನ್ನೂ ಕೊಟ್ಟಿಲ್ಲ. 25 ಸಂಸದರನ್ನು ಕಳುಹಿಸಿಕೊಟ್ಟಿದ್ದರಿಂದ ಅಸಡ್ಡೆ ವಹಿಸಿದ್ದಾರೆ. ಸೋಲಿಸಿದರೆ ಅವರಿಗೆ ಬುದ್ಧಿ ಬರುತ್ತದೆ’ ಎಂದರು.</p>.<p>‘ಉಪ ಚುನಾವಣೆಯಲ್ಲಿ ಅನುಕೂಲ ಜಾಸ್ತಿ. ಸುಳ್ಳು ಹೇಳೋಕೆ, ಹಣ ಹಂಚೋಕೆ ಅವರಿಗೆ ಅವಕಾಶ ಇರುತ್ತದೆ. ಆದರೆ, ಆರ್.ಆರ್. ನಗರ ಹಾಗೂ ಶಿರಾದಲ್ಲಿ ನಾವೇ ಗೆಲ್ಲುತ್ತೇವೆ’ ಎಂದು ತಿಳಿಸಿದರು.</p>.<p>‘ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಕಡಿತಗೊಳಿಸಿದ್ದಾರೆ. ಇಂದಿರಾ ಕ್ಯಾಂಟೀನ್ಗಳಿಗೆ ಹಣ ಕೊಡುತ್ತಿಲ್ಲ. ಕೃಷಿ ಭಾಗ್ಯ, ವಿದ್ಯಾಸಿರಿ ನಿಲ್ಲಿಸಿದ್ದಾರೆ. ಎಲ್ಲ ಯೋಜನೆಯನ್ನೂ ನಿಲ್ಲಿಸಿ ‘ಸ್ವಾಹ ಭಾಗ್ಯ’ ಅವರದು’ ಎಂದು ಟೀಕಿಸಿದರು.</p>.<p><strong>ಜೆಡಿಎಸ್ ಅನ್ನು ಜನ ಮುಗಿಸುತ್ತಾರೆ:</strong> ‘ಜೆಡಿಎಸ್ನ ನಾವು ಮುಗಿಸುವುದಿಲ್ಲ. ಸೈದ್ಧಾಂತಿಕ ಗಟ್ಟಿತನ ಹಾಗೂ ನಿಲುವು ಇಲ್ಲದೆ ಹೋದರೆ ಜನರೇ ಮುಗಿಸುತ್ತಾರೆ’ ಎಂದು ಪ್ರತಿಕ್ರಿಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>