ಬೆಳಗಾವಿ: ರಾಜ್ಯದ ಕ್ರೀಡಾಶಾಲೆಗಳು, ಕ್ರೀಡಾ ಹಾಸ್ಟೆಲ್ ಮತ್ತು ಜಿಲ್ಲಾ ಕ್ರೀಡಾಂಗಣಗಳ ಸ್ಥಿತಿಗತಿ ಕುರಿತು ಪ್ರಜಾವಾಣಿ ಫೆಬ್ರುವರಿ 11ರ ಸಂಚಿಕೆಯ ಒಳನೋಟ ಅಂಕಣದಲ್ಲಿ ಪ್ರಕಟವಾದ ‘ನೆರವಿಗೆ ಕಾಯುತ್ತಿದೆ ಆಟ’ ವಿಶೇಷ ವರದಿಯ ಅಂಶಗಳನ್ನು ಆಧರಿಸಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸೋಮವಾರ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.