ಇಲ್ಲಿ ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆರೋಪಿಗಳು ನಾಲ್ಕೈದು ದಿನಗಳಿಂದ ರವಿ ಹಿಂಬಾಲಿಸಿದ್ದರು. ನಗರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ವಿರಾಟ್ ಹಿಂದೂ ಸಮಾವೇಶಕ್ಕೆ ಅಡ್ಡಿಪಡಿಸಲು ಈ ರೀತಿ ಕೃತ್ಯವೆಸಗಿರುವ ಸಂಶಯವಿದೆ. ರವಿ ಕೋಕಿತ್ಕರ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದು, ಘಟನಾ ಸ್ಥಳಕ್ಕೂ ಹೋಗಿ ಬಂದಿದ್ದೇನೆ’ ಎಂದರು.