ಈ ವಿಶೇಷ ಮದುವೆಗೆ ನಿಡಸೋಶಿಯ ಸಿದ್ಧಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಾಕ್ಷಿಯಾಗಿ, ನವ ದಂಪತಿಯನ್ನು ಹರಸಿದರು. ಬೆಳಗಾವಿಯ ಶ್ರವಣದೋಷವುಳ್ಳ ಮಕ್ಕಳ ವಿಶೇಷ ಶಾಲೆಯ ಶಿಕ್ಷಕ ಶಂಕರಗೌಡ ಪಾಟೀಲ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬೆಂಡವಾಡೆ, ಜೆಡಿಎಸ್ ರಾಯಬಾಗ ಬ್ಲಾಕ್ ಅಧ್ಯಕ್ಷ ಸುರೇಶ ಐಹೊಳೆ, ಮುಖಂಡ ಸಿದಗೌಡ ಕಬಾಡಗಿ, ಅಶೋಕ ಮಾಳಿ, ಅಪ್ಪಾಸಾಹೇಬ ದೇಸಾಯಿ, ಉದಯ ದೇಸಾಯಿ, ಮಹಾವೀರ ಐತವಾಡೆ, ಮಹಾಂತೇಶ ಪಾಟೀಲ, ಎಸ್.ಜಿ. ಉಗಾರೆ, ಶಿವಲಿಂಗಪ್ಪ ಕವಣಿ, ಶಂಕರ ಮಗದುಮ್, ಶಿವಾನಂದ ಕಮತೆ ಇದ್ದರು.