ಬೆಳಗಾವಿ: ಕೇರಳ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಬಂದೋಬಸ್ತ್ಗೆಸರ್ಕಾರದ ಆದೇಶದ ಮೇರೆಗೆ ತೆರಳಲಿರುವ ರಾಜ್ಯ ಮೀಸಲು ಪೊಲೀಸ್ (ಕೆಎಸ್ಆರ್ಪಿ) ಪಡೆಯ ಘಟಕಗಳ ಅಧಿಕಾರಿ ಮತ್ತು ಸಿಬ್ಬಂದಿಗೆ ಜೊತೆಯಲ್ಲಿ ಒಯ್ಯುವುದಕ್ಕಾಗಿ ಕ್ರೀಡಾ ಪರಿಕರಗಳನ್ನು ಶುಕ್ರವಾರ ವಿತರಿಸಲಾಯಿತು.
ಇಲ್ಲಿನ 2ನೇ ಪಡೆಯ ಕಮಾಂಡೆಂಟ್ ಹಂಜಾ ಹುಸೇನ್, ಎಲ್ಲ ತುಕಡಿಗಳ ಸಿಬ್ಬಂದಿಗೆ ವಾಲಿಬಾಲ್ ನೆಟ್, ಫುಟ್ಬಾಲ್, ಚೆಸ್ ಮತ್ತು ಕೇರಂ ಬೋರ್ಡ್ಗಳನ್ನು ವಿತರಿಸಿದರು.
‘ಕೆಎಸ್ಆರ್ಪಿ ಎಡಿಜಿಪಿ ಅಲೋಕ್ಕುಮಾರ್ ನೇತೃತ್ವದಲ್ಲಿ ಈ ಉಪಕ್ರಮ ಕೈಗೊಳ್ಳಲಾಗಿದೆ. ಹೊರ ರಾಜ್ಯದ ಚುನಾವಣೆ ಮತ್ತು ಕಾನೂನು ಸುವ್ಯವಸ್ಥೆಯ ಬಂದೋಬಸ್ತ್ ಕರ್ತವ್ಯದಲ್ಲಿದ್ದಾಗ ಅಧಿಕಾರಿಗಳು ಹಾಗೂ ಸಿಬ್ಬಂದಿ ಸದೃಢವಾಗಿರಲೆಂಬ ದೃಷ್ಟಿಯಿಂದ ಕ್ರೀಡಾ ಪರಿಕರಗಳನ್ನು ವಿತರಿಸಲಾಗಿದೆ.
ಇದರಿಂದ ಅವರು ಚಟುವಟಿಕೆಯಿಂದ ಇದ್ದು ಮತ್ತು ಆರೋಗ್ಯ ಕಾಪಾಡಿಕೊಂಡು ದಕ್ಷವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಲಿದೆ. ಈ ವಿನೂತನ ಕ್ರಮಕ್ಕೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ’ ಎಂದು ತಿಳಿಸಿದರು.