ದಿನೇದಿನೆ ಹೆಚ್ಚುತ್ತಿರುವ ನಾಯಿ ಕಡಿತದ ಪ್ರಕರಣಗಳು, ಆತಂಕದಲ್ಲೇ ಜನರ ಸಂಚಾರ
ಚಂದ್ರಶೇಖರ ಎಸ್ ಚಿನಕೇಕರ
Published : 9 ಸೆಪ್ಟೆಂಬರ್ 2024, 5:24 IST
Last Updated : 9 ಸೆಪ್ಟೆಂಬರ್ 2024, 5:24 IST
ಫಾಲೋ ಮಾಡಿ
Comments
ಚಿಕ್ಕೋಡಿಯ ಕೇಂದ್ರ ಬಸ್ ನಿಲ್ದಾಣದ ಎದುರಿನ ಜನನಿಬಿಡ ಪ್ರದೇಶದಲ್ಲಿ ಬೀದಿನಾಯಿಗಳು ರಾಜಾರೋಷವಾಗಿ ಓಡಾಡುತ್ತಿರುವುದು
ಚಿಕ್ಕೋಡಿ ಹೊರವಲಯದ ಮೆಹಬೂಬ್ ನಗರದಲ್ಲಿ ನೂತನ ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಬೀದಿನಾಯಿಗಳ ಹಿಂಡು
ಬೀದಿನಾಯಿಗಳ ಹಾವಳಿಯಿಂದ ಬೇಸತ್ತಿದ್ದು ಆತಂಕದಲ್ಲೇ ಓಡಾಡುತ್ತಿದ್ದೇವೆ. ಸಂಬಂಧಿತ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು
ಸಾಹಿಲ್ ಬಾಗವಾನ್ ಸ್ಥಳೀಯ ಚಿಕ್ಕೋಡಿ
ಬೀದಿನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಕೈಕಟ್ಟಿ ಕುಳಿತಿರುವುದು ಸರಿಯಲ್ಲ. ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ
ಸಂಜೀವ ಬಡಿಗೇರ ಸಾಮಾಜಿಕ ಕಾರ್ಯಕರ್ತ ಚಿಕ್ಕೋಡಿ
ಮಾಲೀಕರು ತಮ್ಮ ಸಾಕು ನಾಯಿಗಳನ್ನು ಪಶು ಆಸ್ಪತ್ರೆಗೆ ಕರೆತಂದು ರೇಬಿಸ್ ಲಸಿಕೆ ಕೊಡಿಸುತ್ತಿದ್ದಾರೆ. ಆಯಾ ಸ್ಥಳೀಯ ಸಂಸ್ಥೆಯವರು ಬೀದಿನಾಯಿ ಹಿಡಿದುಕೊಟ್ಟರೆ ಅವುಗಳಿಗೂ ಲಸಿಕೆ ಕೊಡುತ್ತೇವೆ
ಡಾ. ಎಸ್.ಎಂ.ಉಪ್ಪಾರ ಮುಖ್ಯ ಪಶು ವೈದ್ಯಾಧಿಕಾರಿ ಚಿಕ್ಕೋಡಿ
ಚಿಕ್ಕೋಡಿಯಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜನರಿಗೆ ಯಾವ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು
ವೆಂಕಟೇಶ ನಾಗನೂರ ಪುರಸಭೆ ಮುಖ್ಯಾಧಿಕಾರಿ ಚಿಕ್ಕೋಡಿ
ಕ್ರಿಯಾಶೀಲವಾಗಲಿ ಸಮಿತಿ:
‘ಪುರಸಭೆ ಮುಖ್ಯಾಧಿಕಾರಿ ತಾಲ್ಲೂಕು ಆರೋಗ್ಯಾಧಿಕಾರಿ ಪಶು ವೈದ್ಯಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಬೀದಿನಾಯಿಗಳ ನಿರ್ವಹಣಾ ಸಮಿತಿ ಇದೆ. ಅದು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ನಿಯಮಿತವಾಗಿ ಸಭೆಗಳನ್ನು ಕರೆದು ಬೀದಿನಾಯಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ.
ಜಾಗೃತಿ ಕಾರ್ಯಕ್ರಮ ಹೆಚ್ಚಲಿ:
ತಾಲ್ಲೂಕಿನಲ್ಲಿ 20 ಪಶು ಆಸ್ಪತ್ರೆಗಳಿವೆ. ‘ಬೀದಿನಾಯಿಗಳಿಂದ ಎಚ್ಚರ ವಹಿಸುವುದು ಹಾಗೂ ರೇಬಿಸ್ ಕಾಯಿಲೆ ಕುರಿತು ಶಾಲಾ–ಕಾಲೇಜು ಹಂತದಲ್ಲಿ ನಾವು ಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ‘ಜಾಗೃತಿ ಕಾರ್ಯಕ್ರಮ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಅವು ಹೆಚ್ಚಬೇಕಿದೆ’ ಎಂಬ ಒತ್ತಾಯ ಜನರದ್ದು.