ಸ್ಥಳೀಯ ವಿಎಸ್ಎಮ್ ಸಂಸ್ಥೆಯ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಂತ್ರಿಕ ಪದವಿ ಮುಗಿದ ನಂತರ ನಮ್ಮ ವಿದ್ಯಾರ್ಥಿಗಳು ಕೈಯಲ್ಲಿ ಪ್ರಮಾಣಪತ್ರಗಳು ಹಿಡಿದು ಅಲ್ಲಲ್ಲಿ ಉದ್ಯೋಗವಕಾಶಕ್ಕಾಗಿ ಅಲೆದಾಡ ಬಾರದು ಎಂಬ ಉದ್ದೇಶದಿಂದ ಅನೇಕ ಪ್ರತಿಷ್ಠಿತ ಕಂಪನಿಗಳು ನಮ್ಮ ಮಹಾವಿದ್ಯಾಲಯಕ್ಕೆ ಬರುವಂತೆ ಮಾಡಲಾಗಿದೆ. ಅದರಂತೆ ಮೆಕ್ಯಾನಿಕಲ್ ವಿಭಾಗದ ಇರ್ಷಾದ ಮಕಾನದಾರ, ರುತುಜಾ ನವಾಳೆ, ಇ ಮತ್ತು ಸಿ ವಿಭಾಗದ ಓಂಕಾರ ಮುತಾಲಿಕ, ಸಿಎಸ್ ವಿಭಾಗದ ಪದ್ಮಭೂಷಣ ಅಡದಾಂಡೆ ಮತ್ತು ವೈಭವ ಪಾಟೀಲ ಇನ್ಫೊಸಿಸ್ಗೆ ಆಯ್ಕೆಯಾಗಿದ್ದಾರೆ. ಇದರಲ್ಲಿ ಪದ್ಮಭೂಷಣ ಅಡದಾಂಡೆ ವಿದ್ಯಾರ್ಥಿ ಏಕಕಾಲದಲ್ಲಿ 5 ಕಂಪನಿಗಳಲ್ಲಿ ಆಯ್ಕೆಗೊಂಡಿದ್ದು ಹಾಗೂ ಅತ್ಯಧಿಕ ವರಮಾನದೊಂದಿಗೆ ರಾಹುಲ ನಸಲಾಪೂರೆ ಟಿಸಿಎಸ್ ನಲ್ಲಿ ಆಯ್ಕೆಯಾಗಿದ್ದು ವಿಶೇಷವಾಗಿದೆ ಎಂದರು.