10ರಂದು ಸಂಜೆ 5ಕ್ಕೆ ಜಾತ್ರಾ ಮಹೋತ್ಸವದ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. ಮಹಾಲಕ್ಷ್ಮಿ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಸಮಿತಿ ಪದಾಧಿಕಾರಿಗಳು, ಪೂಜಾರಿಗಳು ಹಾಗೂ ದೇವಿಯ ಹಕ್ಕುದಾರರಿಂದ ಚಾಲನೆ ಸಿಗಲಿದೆ. ಗ್ರಾಮದ ಬಡಿಗೇರ (ತವರು ಮನೆ) ಮನೆಯಲ್ಲಿ ದೇವಿಗೆ ಹಕ್ಕುದಾರರು ಉಡಿ ತುಂಬಿದ ಬಳಿಕ ರಾತ್ರಿ 12ರ ಬಳಿಕ ದೇವಿಯ ಹೊನ್ನಾಟ ಆರಂಭಗೊಳ್ಳಲಿದೆ. ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ. ಇಡೀ ರಾತ್ರಿ ಹಾಗೂ ಮರುದಿನ ಸಂಜೆವರೆಗೆ ಹೊನ್ನಾಟವಿರಲಿದ್ದು, ಸಂಪ್ರದಾಯದಂತೆ ನಿಗದಿತ ಸ್ಥಳಗಳಲ್ಲಿ ಸಾರ್ವಜನಿಕರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಲಿದೆ.