ಪಾಲಿಕೆ ಎದುರು ಕನ್ನಡ ಪರ ಹೋರಾಟಗಾರರು ಕನ್ನಡ ಧ್ವಜ ಹಾರಿಸಿರುವುದನ್ನು ವಿರೋಧಿಸಿ, ಎಂಇಎಸ್ ಮತ್ತು ಶಿವಸೇನಾ ಕಾರ್ಯಕರ್ತರು ಕಾಲೇಜು ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಸಮಯದಲ್ಲೇ ಐವರು ಕಾರ್ಯಕರ್ತೆಯರು ಭಗವಾಧ್ವಜವಿದ್ದ ಕಂಬದೊಂದಿಗೆ ಪಾಲಿಕೆ ಮುಂಭಾಗಕ್ಕೆ ತೆರಳಲು ಯತ್ನಿಸಿದರು.ಅವರನ್ನು ಮಾರ್ಗ ಮಧ್ಯೆದಲ್ಲೇ ಪೊಲೀಸರು ತಡೆದಿದ್ದರಿಂದ, ಭಗವಾ ಧ್ವಜ ಹಾರಿಸಬೇಕೆಂಬ ಆ ಕಾರ್ಯಕರ್ತೆಯರ ಯತ್ನ ವಿಫಲವಾಯಿತು.