<p><strong>ಅಥಣಿ:</strong> ತಾಲ್ಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಬ್ಬಿಗೆ ಪರ್ಯಾಯವಾಗಿ ಕೆಲವು ರೈತರು ಅರಿಸಿನ ಬೆಳೆಯಲು ಆರಂಭಿಸಿದ್ದಾರೆ. ಆದರೆ, ಅವರು ಸಿದ್ಧಪಡಿಸಿದ ಅರಿಸಿನಕ್ಕೆ ಮಧ್ಯವರ್ತಿಗಳು, ದಳ್ಳಾಳಿಗಳ ಹಾವಳಿಯಿಂದಾಗಿ ಅವರಿಗೆ ಸರಿಯಾದ ಬೆಲೆ ದೊರೆಯುತ್ತಿಲ್ಲ.</p>.<p>ಮುಂಗಾರು ಹಂಗಾಮು ಆರಂಭವಾಗಿದ್ದು, ರೈತರು ಬಿತ್ತನೆಬೀಜಗಳನ್ನು ಸಂಗ್ರಹಿಸಲು ಆರಂಭಿಸಿದ್ದಾರೆ. ಆಂಧ್ರಪ್ರದೇಶದಿಂದ ಬಂದ ಕೆಲವರು ಇಲ್ಲಿ ಅರಿಸಿನ ಬಿತ್ತನೆಬೀಜಗಳನ್ನು ಮಾರಾಟ ಮಾಡುತ್ತಿದ್ದಾರೆ. ಬೆಳೆದ ಬಂತರ ಮಾರುವಾಗ ಅರಿಸಿನಕ್ಕೆ ಇಲ್ಲದ ಬೆಲೆ, ಬಿತ್ತನೆಬೀಜ ಖರೀದಿಸುವಾಗ ಹೆಚ್ಚಾಗಿದೆ. ಇದು ರೈತರಿಗೆ ಹೊರೆಯಾಗಿ ಪರಿಣಮಿಸಿದೆ.</p>.<p>ಸಾಮಾನ್ಯವಾಗಿ ಕ್ವಿಂಟಲ್ಗೆ ₹ 2000ದಿಂದ ₹ 2500 ಬೆಲೆ ಇರುತ್ತದೆ. ಆದರೆ, ಮಳೆಯಾದರೆ ₹ 3500ರಿಂದ ₹ 5000ಕ್ಕೆ ಹೆಚ್ಚಿಸುತ್ತಾರೆ. ರೈತರ ಅನಿವಾರ್ಯವನ್ನು ದಲ್ಲಾಳಿಗಳು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಬೇಕಾದಂತೆ ಬೆಲೆ ನಿಗದಿಪಡಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಗಳು ಕೇಳಿಬರುತ್ತಿವೆ.</p>.<p>ತೋಟಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ ತಾಲ್ಲೂಕಿನಲ್ಲಿ 4500 ಎಕರೆ ಪ್ರದೇಶದಲ್ಲಿ ಅರಿಸಿನ ಬೆಳೆಯಲಾಗುತ್ತಿದೆ. ಟನ್ ಕಬ್ಬಿಗೆ ಸಕ್ಕರೆ ಕಾರ್ಖಾನೆಯವರು ಗರಿಷ್ಠ ₹ 2500ರಿಂದ ₹ 2800 ಕೊಡುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ಅರಿಸಿನ ಕ್ವಿಂಟಲ್ಗೆ ₹ 12ಸಾವಿರದಿಂದ ₹ 16ಸಾವಿರದರೆಗೆ ಇರುತ್ತದೆ. ಆದರಲ್ಲೂ ದಲ್ಲಾಳಿಗಳು ಮೋಸ ಮಾಡುತ್ತಾರೆ. ಸರಾಸರಿ ₹ 8ಸಾವಿರಕ್ಕೆ ಖರೀದಿಸುತ್ತಿದ್ದಾರೆ. ರೈತರಿಗೆ ನ್ಯಾಯಯುತ ಬೆಲೆ ದೊರೆಯುತ್ತಿಲ್ಲ ಎಂಬ ದೂರುಗಳಿವೆ.</p>.<p>‘ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಬೇಕು. ರೈತರಿಗೆ ಅರಿವು ಮೂಡಿಸಬೇಕು. ದಲ್ಲಾಳಿಗಳ ಹಾವಳಿ ತಪ್ಪಿಸಬೇಕು. ಆಗ, ಅರಿಸಿನವು ರೈತರಿಗೆ ಬಂಗಾರದ ಬೆಳೆಯಾಗುವುದರಲ್ಲಿ ಸಂಶಯವಿಲ್ಲ’ ಎನ್ನುತ್ತಾರೆ ಚಿಂತಕ ಚಿದಾನಂದ ಪಾಟೀಲ.</p>.<p>‘ಮಳೆಯಾಗುತ್ತಿದ್ದಂತೆಯೇ ಅರಿಸಿನ ಬಿತ್ತನೆ ಬೀಜದ ದರವನ್ನು ದಲ್ಲಾಳಿಗಳು ಏಕಾಏಕಿ ಹೆಚ್ಚಿಸುತ್ತಾರೆ. ಇದರಿಂದ ರೈತರಿಗೆ ತುಂಬಾ ಕಷ್ಟವಾಗುತ್ತದೆ. ಈ ವಿಷಯವನ್ನು ಶಾಸಕರ ಗಮನಕ್ಕೂ ತಂದಿದ್ದೇವೆ. ಸಮಸ್ಯೆ ಬಗೆಹರಿಸದಿದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ’ ಎಂದು ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಮಡಿವಾಳ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಥಣಿ:</strong> ತಾಲ್ಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಬ್ಬಿಗೆ ಪರ್ಯಾಯವಾಗಿ ಕೆಲವು ರೈತರು ಅರಿಸಿನ ಬೆಳೆಯಲು ಆರಂಭಿಸಿದ್ದಾರೆ. ಆದರೆ, ಅವರು ಸಿದ್ಧಪಡಿಸಿದ ಅರಿಸಿನಕ್ಕೆ ಮಧ್ಯವರ್ತಿಗಳು, ದಳ್ಳಾಳಿಗಳ ಹಾವಳಿಯಿಂದಾಗಿ ಅವರಿಗೆ ಸರಿಯಾದ ಬೆಲೆ ದೊರೆಯುತ್ತಿಲ್ಲ.</p>.<p>ಮುಂಗಾರು ಹಂಗಾಮು ಆರಂಭವಾಗಿದ್ದು, ರೈತರು ಬಿತ್ತನೆಬೀಜಗಳನ್ನು ಸಂಗ್ರಹಿಸಲು ಆರಂಭಿಸಿದ್ದಾರೆ. ಆಂಧ್ರಪ್ರದೇಶದಿಂದ ಬಂದ ಕೆಲವರು ಇಲ್ಲಿ ಅರಿಸಿನ ಬಿತ್ತನೆಬೀಜಗಳನ್ನು ಮಾರಾಟ ಮಾಡುತ್ತಿದ್ದಾರೆ. ಬೆಳೆದ ಬಂತರ ಮಾರುವಾಗ ಅರಿಸಿನಕ್ಕೆ ಇಲ್ಲದ ಬೆಲೆ, ಬಿತ್ತನೆಬೀಜ ಖರೀದಿಸುವಾಗ ಹೆಚ್ಚಾಗಿದೆ. ಇದು ರೈತರಿಗೆ ಹೊರೆಯಾಗಿ ಪರಿಣಮಿಸಿದೆ.</p>.<p>ಸಾಮಾನ್ಯವಾಗಿ ಕ್ವಿಂಟಲ್ಗೆ ₹ 2000ದಿಂದ ₹ 2500 ಬೆಲೆ ಇರುತ್ತದೆ. ಆದರೆ, ಮಳೆಯಾದರೆ ₹ 3500ರಿಂದ ₹ 5000ಕ್ಕೆ ಹೆಚ್ಚಿಸುತ್ತಾರೆ. ರೈತರ ಅನಿವಾರ್ಯವನ್ನು ದಲ್ಲಾಳಿಗಳು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಬೇಕಾದಂತೆ ಬೆಲೆ ನಿಗದಿಪಡಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಗಳು ಕೇಳಿಬರುತ್ತಿವೆ.</p>.<p>ತೋಟಗಾರಿಕೆ ಇಲಾಖೆಯ ಮಾಹಿತಿ ಪ್ರಕಾರ ತಾಲ್ಲೂಕಿನಲ್ಲಿ 4500 ಎಕರೆ ಪ್ರದೇಶದಲ್ಲಿ ಅರಿಸಿನ ಬೆಳೆಯಲಾಗುತ್ತಿದೆ. ಟನ್ ಕಬ್ಬಿಗೆ ಸಕ್ಕರೆ ಕಾರ್ಖಾನೆಯವರು ಗರಿಷ್ಠ ₹ 2500ರಿಂದ ₹ 2800 ಕೊಡುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ಅರಿಸಿನ ಕ್ವಿಂಟಲ್ಗೆ ₹ 12ಸಾವಿರದಿಂದ ₹ 16ಸಾವಿರದರೆಗೆ ಇರುತ್ತದೆ. ಆದರಲ್ಲೂ ದಲ್ಲಾಳಿಗಳು ಮೋಸ ಮಾಡುತ್ತಾರೆ. ಸರಾಸರಿ ₹ 8ಸಾವಿರಕ್ಕೆ ಖರೀದಿಸುತ್ತಿದ್ದಾರೆ. ರೈತರಿಗೆ ನ್ಯಾಯಯುತ ಬೆಲೆ ದೊರೆಯುತ್ತಿಲ್ಲ ಎಂಬ ದೂರುಗಳಿವೆ.</p>.<p>‘ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಬೇಕು. ರೈತರಿಗೆ ಅರಿವು ಮೂಡಿಸಬೇಕು. ದಲ್ಲಾಳಿಗಳ ಹಾವಳಿ ತಪ್ಪಿಸಬೇಕು. ಆಗ, ಅರಿಸಿನವು ರೈತರಿಗೆ ಬಂಗಾರದ ಬೆಳೆಯಾಗುವುದರಲ್ಲಿ ಸಂಶಯವಿಲ್ಲ’ ಎನ್ನುತ್ತಾರೆ ಚಿಂತಕ ಚಿದಾನಂದ ಪಾಟೀಲ.</p>.<p>‘ಮಳೆಯಾಗುತ್ತಿದ್ದಂತೆಯೇ ಅರಿಸಿನ ಬಿತ್ತನೆ ಬೀಜದ ದರವನ್ನು ದಲ್ಲಾಳಿಗಳು ಏಕಾಏಕಿ ಹೆಚ್ಚಿಸುತ್ತಾರೆ. ಇದರಿಂದ ರೈತರಿಗೆ ತುಂಬಾ ಕಷ್ಟವಾಗುತ್ತದೆ. ಈ ವಿಷಯವನ್ನು ಶಾಸಕರ ಗಮನಕ್ಕೂ ತಂದಿದ್ದೇವೆ. ಸಮಸ್ಯೆ ಬಗೆಹರಿಸದಿದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ’ ಎಂದು ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಮಡಿವಾಳ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>