ಬೆಳಗಾವಿ: ಸತತ ಮಳೆಯಿಂದಾಗಿ ಮರವೊಂದು ಬೈಕ್ ಮೇಲೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ತಾಲ್ಲೂಕಿನ ಬೆಳಗುಂದಿ ಬಳಿ ಬಿಜಗರ್ಣಿ ರಸ್ತೆಯಲ್ಲಿ ಭಾನುವಾರ ಸಂಭವಿಸಿದೆ.
ಕರ್ಲೆ ಗ್ರಾಮದ ಸೋಮನಾಥ ಮುಚ್ಚಂಡಿಕರ(21), ವಿಠ್ಠಲ ತಳವಾರ(16) ಮೃತರು.
‘ಈ ಬೈಕ್ ಮೇಲೆ ಮೂವರು ಸಂಚರಿಸುತ್ತಿದ್ದರು. ಈ ಪೈಕಿ ಸೋಮನಾಥ ಸ್ಥಳದಲ್ಲೇ ಮೃತಪಟ್ಟರೆ, ವಿಠ್ಠಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗಾಯಗೊಂಡ ಸ್ವಪ್ನಿಲ್ ದೇಸಾಯಿ(17) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ಸೇರಿಕೊಂಡು ಕರ್ಲೆಯಿಂದ ಉಚಗಾವಿಗೆ ಹೋಗುತ್ತಿದ್ದರು' ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.