ನಾವು ಸದಾ ಕಾಲ ಭಗವಂತನ ಸ್ಮರಣೆಯನ್ನು ಮಾಡಬೇಕು ಎನ್ನುವುದನ್ನು ಬಸವಣ್ಣನವರು ಸೊಗಸಾಗಿ ಇಲ್ಲಿ ವಿವರಿಸಿದ್ದಾರೆ. ಸೂರ್ಯೋದಯವಾದ ತಕ್ಷಣ
ಭಗವಂತನ ಸ್ಮರಣೆ ಮಾಡುವುದು ರೂಢಿಯಲ್ಲಿರುವ ವಿಚಾರ. ಆದರೆ, ನಾವು ಭಗವಂತನ ಸ್ಮರಣೆ ಪ್ರಾರಂಭಿಸಿದರೆ ಅದೇ ನಮಗೆ ಉದಯವಾದಂತೆ. ನಾವು ಸ್ಮರಿಸುವುದನ್ನು ಮರೆತರೆ ನಮ್ಮ ಜೀವನದಲ್ಲಿ ಕತ್ತಲೆ ಆವರಿಸಿದಂತೆ (ಅಸ್ತಮಾನವಾದಂತೆ). ಭಗವಂತನ ಸ್ಮರಣೆಯೇ ಜೀವನದ ಉಸಿರಾಗಿರಬೇಕು. ನಮ್ಮಕಣ ಕಣದಲ್ಲಿಯೂ ಭಗವಂತನ ನಾಮಸ್ಮರಣೆಯೇ ತುಂಬಿರಬೇಕು. ನಮ್ಮ ಹೃದಯದಲ್ಲಿ ಶಿವನ ಚರಣಗಳ ಸ್ಮರಣೆಯೆ ತುಂಬಿರಬೇಕು. ಸದಾ ಕಾಲ ಶಿವಪಂಚಾಕ್ಷರಿ ಮಂತ್ರವನ್ನು ಜಪಿಸುತ್ತಿರಬೇಕು. ನಮ್ಮ ತನು, ಮನ, ಭಾವದಲ್ಲಿ ಭಗವತ್ಸೇವೆಯ ಚಿಂತನೆಯನ್ನೆ ಮಾಡುತ್ತಿರಬೇಕು. ಇದರಿಂದ ದೇವರ ಕೃಪೆಯಾಗುತ್ತದೆ ಎನ್ನುವುದನ್ನು ಅವರು ಈ ವಚನದ ಮೂಲಕ ತಿಳಿಸಿದ್ದಾರೆ.