ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತ ಚಾಂಚಲ್ಯಕ್ಕೆ ಸೋಲಬಾರದು: ಡಾ.ಅಲ್ಲಮಪ್ರಭು ಸ್ವಾಮೀಜಿ

Last Updated 10 ನವೆಂಬರ್ 2021, 5:22 IST
ಅಕ್ಷರ ಗಾತ್ರ

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠ, ಬೆಳಗಾವಿ

–––––

ಬಂದ ಯೋನಿಯನರಿದು ಸಲಹೆನ್ನ ತಂದೆ!

ಬೆಂದ ಮನವೆನ್ನ ಗತಿಗೆಡಿಸಿ ಕಾಡಿತ್ತು;

ಬೆಂದ ಮನವೆನ್ನ ಮತಿಗೆಡಿಸಿ ಕಾಡಿತ್ತು

ಎನ್ನ ತಂದೆ ಕೂಡಲಸಂಗಮದೇವಾ ಇವ ಮಾಣಿಸು ನಿಮ್ಮ ಧರ್ಮ!

ಎಂಬತ್ನಾಲ್ಕು ಜೀವರಾಶಿಗಳನ್ನು ಸುತ್ತಿ ಬರುವ ಈ ಶರೀರವು; ಅರಿವು, ಆಚಾರದ ಕುರಿತು ಚಿಂತಿಸದೆ ಮನಸ್ಸಿನ ಚಿತ್ತ ಚಾಂಚಲ್ಯಕ್ಕೆ ಒಳಗಾಗಿ ತನ್ನ ಗುರಿಯನ್ನೇ ಮರೆತು ಬಿಟ್ಟಿದೆ. ಅದಕ್ಕಾಗಿಯೇ ಬಸವಣ್ಣನವರು ನಾನು ಬಂದ ರೀತಿಯನ್ನಾದರೂ ನೋಡಿ ನನ್ನನ್ನು ಸಲಹು ತಂದೆ ಎಂದು ಈ ವಚನದ ಮೂಲಕ ಬೇಡಿಕೊಂಡಿದ್ದಾರೆ. ಮನಸ್ಸಿನ ಮಾತು ಕೇಳಿ ಗುರಿಯನ್ನು ತಪ್ಪುತ್ತಿದ್ದೇನೆ; ಬುದ್ಧಿಯು ಅದರ ಪ್ರಭಾವಕ್ಕೊಳಗಾಗಿದೆ ಎಂದಿದ್ದಾರೆ. ಮನುಷ್ಯನಿಗೆ ಮನಸ್ಸು ಮತ್ತು ಬುದ್ಧಿ ಬಹಳ ಮುಖ್ಯವಾದವು. ಅವುಗಳನ್ನು ಹಿಡಿತದಲ್ಲಿಟ್ಟುಕೊಂಡವರು ಶ್ರೇಷ್ಠರಾಗುತ್ತಾರೆ. ಭಾಗಶಃ ಜನರು ಇವುಗಳ ಹಿಡಿತದಲ್ಲಿರುವುದರಿಂದ ಭಗವಂತನ ಆರಾಧನೆ ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ಬಸವಣ್ಣನವರು ಇವುಗಳ ತಪ್ಪುಗಳನ್ನು ಮನ್ನಿಸಿ, ನನ್ನನ್ನು ಕಾಪಾಡು ಎಂದು ಪ್ರಾರ್ಥಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT