ಆ.22ರಂದು ರಕ್ಷಾ ಬಂಧನ ಆಚರಣೆ ಇದೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಈ ಉಪಕ್ರಮ ಆರಂಭಿಸಿದೆ. ಈ ಬಾರಿ ಹೆಣ್ಣು ಮಕ್ಕಳು ರಾಖಿ ತರುವುದಕ್ಕಾಗಿ ಅಂಗಡಿಗಳಿಗೇ ಹೋಗಬೇಕಿಲ್ಲ. ಅಂಚೆ ಇಲಾಖೆ ಪ್ರಾರಂಭಿಸಿರುವ ಆನ್ಲೈನ್ ಸೇವೆಯಲ್ಲಿ ಬುಕ್ ಮಾಡಿದರೆ ಅಂಚೆಯಣ್ಣಂದಿರೇ ರಾಖಿಗಳನ್ನು ಆಯಾ ವಿಳಾಸಕ್ಕೆ ಕಳುಹಿಸುತ್ತಾರೆ. ಈ ವಿಶೇಷ ಸೇವೆಯು ಆ.6ರಿಂದ ಶುರುವಾಗಿದ್ದು, ಆ. 16ರವರೆಗೆ ಬುಕ್ ಮಾಡಲು ಅವಕಾಶವಿದೆ. ರಕ್ಷಾಬಂಧನದ ದಿನದೊಳಗೆ ರಾಖಿಯು ನಿಗದಿತ ವಿಳಾಸ ತಲುಪುವಂತೆ ಇಲಾಖೆಯು ವ್ಯವಸ್ಥೆ ಮಾಡಿದೆ ಎಂದು ಇಲ್ಲಿನ ಕೇಂದ್ರ ಅಂಚೆ ಕಚೇರಿಯ ಸೂಪರಿಂಟೆಂಡೆಂಟ್ ಎಚ್.ಬಿ. ಹಸಬಿ ‘ಪ್ರಜಾವಾಣಿ’ಗೆ ತಿಳಿಸಿದರು.