ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ಲಖನ್ಗೆ 2ನೇ ಟಿಕೆಟ್ ನೀಡುವಂತೆ ನಾನು, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದೆ ಮಂಗಲಾ ಅಂಗಡಿ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಕೇಳಿದ್ದೆವು. ರಮೇಶ ಜಾರಕಿಹೊಳಿ ಕೇಳಿರಲಿಲ್ಲ. ಪಕ್ಷ ಸಿಂಗಲ್ ಟಿಕೆಟ್ ಕೊಟ್ಟಿದ್ದರಿಂದ ಲಖನ್ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಅವರು ಕಣದಿಂದ ಹಿಂದೆ ಸರಿಯುವಂತೆ ಮಾಡುವಂತೆ ವರಿಷ್ಠರಾರೂ ನಮ್ಮ ಮೇಲೆ ಒತ್ತಡ ಹೇರಿಲ್ಲ’ಎಂದು ಹೇಳಿದರು.