<p><strong>ಬೆಳಗಾವಿ</strong>: ಇಲ್ಲಿನ ಮಹಾಂತೇಶ ನಗರದ ರಾಷ್ಟ್ರೀಯ ಹೆದ್ದಾರಿ ಸೇತುವೆ ಬಳಿ ಕನಕದಾಸ ವೃತ್ತದಲ್ಲಿ ಗುರುವಾರ ಸ್ಕ್ರೂಡ್ರೈವರ್ನಿಂದ ಚುಚ್ಚಿ ಯುವಕನ ಕೊಲೆ ಮಾಡಲಾಗಿದೆ. ಪ್ರೀತಿ–ಪ್ರೇಮದ ವಿಷಯವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.</p><p>ಗಾಂಧಿ ನಗರದ ನಿವಾಸಿ, ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಇಬ್ರಾಹಿಂ ಗೌಸ್ (22) ಕೊಲೆಯಾದವರು. ಇದೇ ಪ್ರದೇಶದ ಬೈಕ್ ಮೆಕ್ಯಾನಿಕ್ ಮುಜಮಿಲ್ ಸತ್ತಿಗೇರಿ (23) ಆರೋಪಿ.</p><p>ಮುಜಮಿಲ್ ಅವರ ಸಹೋದರಿ ಹಾಗೂ ಇಬ್ರಾಹಿಂ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಡುವಂತೆ ಯುವತಿಯ ಮನೆಯವರಲ್ಲಿ ಮಾತುಕತೆ ನಡೆಸಿದ್ದರು. ಈ ಪ್ರೇಮ ವಿವಾಹಕ್ಕೆ ಹುಡುಗಿ ಮನೆಯವರು ನಿರಾಕರಿಸಿದ್ದರು. ಅಲ್ಲದೇ, ಪರಸ್ಪರ ದೂರ ಇರುವಂತೆ ಪ್ರೇಮಿಗಳಿಗೆ ತಾಕೀತು ಮಾಡಿದ್ದರು.</p><p>ಗುರುವಾರ ಯುವತಿಯನ್ನು ಭೇಟಿಯಾದ ಇಬ್ರಾಹಿಂ ಬೈಕಿನಲ್ಲಿ ಸುತ್ತಾಡಿಸುತ್ತಿದ್ದ. ಇದನ್ನು ಕಂಡು ಮುಜಮಿಲ್ ಬೈಕ್ ನಿಲ್ಲಿಸಿ ತಕರಾರು ತೆಗೆದ. ತನ್ನೊಂದಿಗೆ ಮನೆಗೆ ಬರುವಂತೆ ಸಹೋದರಿಯನ್ನು ಒತ್ತಾಯಿಸಿದ. ಯುವತಿ ಅದಕ್ಕೆ ಒಪ್ಪಲಿಲ್ಲ. ಈ ವೇಳೆ ಇಬ್ಬರೂ ಯುವಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮುಜಮಿಲ್ ತನ್ನ ಬಳಿ ಇದ್ದ ಸ್ಕ್ರೂಡ್ರೈವರ್ನಿಂದ ಇಬ್ರಾಹಿಂನ ಹೊಟ್ಟೆಗೆ ಚುಚ್ಚಿದ.</p><p>ಸ್ಥಳದಲ್ಲಿ ಬಿದ್ದು ಒದ್ದಾಡುತ್ತಿದ್ದ ಯುವಕನನ್ನು ಸಂಚಾರ ಠಾಣೆ ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಯುವಕ ಕೊನೆಯುಸಿರೆಳೆದ ಎಂದು ಮಾಳಮಾರುತಿ ಠಾಣೆಯ ಸಿಪಿಐ ಜೆ.ಎಂ.ಕಾಲಿಮಿರ್ಚಿ ತಿಳಿಸಿದ್ದಾರೆ.</p><p>ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಇದರಲ್ಲಿ ಯಾರ ತಪ್ಪಿದೆ ಎಂಬುದನ್ನು ತನಿಖೆ ಮಾಡಲಾಗುತ್ತಿದೆ ಎಂದೂ ಸಿಪಿಐ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಇಲ್ಲಿನ ಮಹಾಂತೇಶ ನಗರದ ರಾಷ್ಟ್ರೀಯ ಹೆದ್ದಾರಿ ಸೇತುವೆ ಬಳಿ ಕನಕದಾಸ ವೃತ್ತದಲ್ಲಿ ಗುರುವಾರ ಸ್ಕ್ರೂಡ್ರೈವರ್ನಿಂದ ಚುಚ್ಚಿ ಯುವಕನ ಕೊಲೆ ಮಾಡಲಾಗಿದೆ. ಪ್ರೀತಿ–ಪ್ರೇಮದ ವಿಷಯವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.</p><p>ಗಾಂಧಿ ನಗರದ ನಿವಾಸಿ, ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಇಬ್ರಾಹಿಂ ಗೌಸ್ (22) ಕೊಲೆಯಾದವರು. ಇದೇ ಪ್ರದೇಶದ ಬೈಕ್ ಮೆಕ್ಯಾನಿಕ್ ಮುಜಮಿಲ್ ಸತ್ತಿಗೇರಿ (23) ಆರೋಪಿ.</p><p>ಮುಜಮಿಲ್ ಅವರ ಸಹೋದರಿ ಹಾಗೂ ಇಬ್ರಾಹಿಂ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಡುವಂತೆ ಯುವತಿಯ ಮನೆಯವರಲ್ಲಿ ಮಾತುಕತೆ ನಡೆಸಿದ್ದರು. ಈ ಪ್ರೇಮ ವಿವಾಹಕ್ಕೆ ಹುಡುಗಿ ಮನೆಯವರು ನಿರಾಕರಿಸಿದ್ದರು. ಅಲ್ಲದೇ, ಪರಸ್ಪರ ದೂರ ಇರುವಂತೆ ಪ್ರೇಮಿಗಳಿಗೆ ತಾಕೀತು ಮಾಡಿದ್ದರು.</p><p>ಗುರುವಾರ ಯುವತಿಯನ್ನು ಭೇಟಿಯಾದ ಇಬ್ರಾಹಿಂ ಬೈಕಿನಲ್ಲಿ ಸುತ್ತಾಡಿಸುತ್ತಿದ್ದ. ಇದನ್ನು ಕಂಡು ಮುಜಮಿಲ್ ಬೈಕ್ ನಿಲ್ಲಿಸಿ ತಕರಾರು ತೆಗೆದ. ತನ್ನೊಂದಿಗೆ ಮನೆಗೆ ಬರುವಂತೆ ಸಹೋದರಿಯನ್ನು ಒತ್ತಾಯಿಸಿದ. ಯುವತಿ ಅದಕ್ಕೆ ಒಪ್ಪಲಿಲ್ಲ. ಈ ವೇಳೆ ಇಬ್ಬರೂ ಯುವಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮುಜಮಿಲ್ ತನ್ನ ಬಳಿ ಇದ್ದ ಸ್ಕ್ರೂಡ್ರೈವರ್ನಿಂದ ಇಬ್ರಾಹಿಂನ ಹೊಟ್ಟೆಗೆ ಚುಚ್ಚಿದ.</p><p>ಸ್ಥಳದಲ್ಲಿ ಬಿದ್ದು ಒದ್ದಾಡುತ್ತಿದ್ದ ಯುವಕನನ್ನು ಸಂಚಾರ ಠಾಣೆ ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಯುವಕ ಕೊನೆಯುಸಿರೆಳೆದ ಎಂದು ಮಾಳಮಾರುತಿ ಠಾಣೆಯ ಸಿಪಿಐ ಜೆ.ಎಂ.ಕಾಲಿಮಿರ್ಚಿ ತಿಳಿಸಿದ್ದಾರೆ.</p><p>ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಇದರಲ್ಲಿ ಯಾರ ತಪ್ಪಿದೆ ಎಂಬುದನ್ನು ತನಿಖೆ ಮಾಡಲಾಗುತ್ತಿದೆ ಎಂದೂ ಸಿಪಿಐ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>