ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಝುಂಜರವಾಡ– ಜಮಖಂಡಿ ರಸ್ತೆ ಜಲಾವೃತ

Last Updated 7 ಆಗಸ್ಟ್ 2020, 13:49 IST
ಅಕ್ಷರ ಗಾತ್ರ

ಅಥಣಿ: ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ್ದರಿಂದ, ತಾಲ್ಲೂಕಿನ ಝುಂಜರವಾಡ ಹಾಗೂ ಜಮಖಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಶುಕ್ರವಾರ ಜಲಾವೃತವಾಗಿದೆ.

ನದಿಯ ಹಿನ್ನೀರಿನಿಂದ ಝುಂಜರವಾಡ–ತುಬಚಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಅವಳಿ ತಾಲ್ಲೂಕಿನ ಸಂಪರ್ಕ ಕಡಿತಗೊಂಡಿದ್ದರಿಂದ ಜನರು ಪರದಾಡುವಂತಾಗಿದೆ.

ತುಬಚಿ– ಝುಂಜರವಾಡ ಗ್ರಾಮಗಳಿಗೆ ಒಂದು ಕಿ.ಮೀ. ಬದಲಿಗೆ 10 ಕಿಲೋ ಮೀಟರ್ ಸುತ್ತಿಕೊಂಡು ಬರುವ ಅನಿವಾರ್ಯ ಎದುರಾಗಿದೆ.

ಅಥಣಿ– ಝುಂಜರವಾಡ ಮಾರ್ಗವಾಗಿ ಬಾಗಲಕೋಟೆ– ಜಮಖಂಡಿ ಸಂಪರ್ಕಕ್ಕೆ 15 ಕಿ.ಮೀ. ಬದಲಿಗೆ ಈಗ 40 ಕಿಲೋ ಮೀಟರ್‌ ಪ್ರಯಾಣಿಸಬೇಕು. ಸಾವಳಗಿ ಮಾರ್ಗವಾಗಿ ಜಮಖಂಡಿಗೆ ಹೋಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT