ಬಾಗಲಕೋಟೆ ಜಿಲ್ಲೆಯ ಮುಧೋಳದ ಮುಬಿನಾ ಯಲಿಗಾರ ಅವರು ತಮ್ಮ 13 ದಿನಗಳ ಮಗುವಿಗೆ ಚಿಕಿತ್ಸೆಗಾಗಿ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಬರುತ್ತಿದ್ದರು. ಅವರ ವಾಹನ ನಗರ ಪ್ರವೇಶಿಸುತ್ತಿದ್ದಂತೆಯೇ ಸಂಚಾರ, ಮಾರಿಹಾಳ ಮತ್ತು ಮಾಳಮಾರುತಿ ಠಾಣೆ ಪೊಲೀಸರು ಕರಡಿಗುದ್ದಿಯಿಂದ ಕೆಎಲ್ಇ ಆಸ್ಪತ್ರೆವರೆಗೂ ಸಂಜೆ 4.20ರಿಂದ 4.45ರವರೆಗೆ ‘ಶೂನ್ಯ ಸಂಚಾರ’ ವ್ಯವಸ್ಥೆ ಮಾಡಿಕೊಟ್ಟರು. ಪೊಲೀಸರ ಸಹಕಾರಕ್ಕಾಗಿ ಮಗುವಿನ ತಾಯಿ ಹಾಗೂ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.