<p>ರಾಯಬಾಗ: ಕುಡಿಯುವ ನೀರಿನ ಮೂಲವಾಗಿದ್ದ ಹುಲ್ಯಾಳ ಕೆರೆ ಬತ್ತಿ ಹೋದ ಕಾರಣ ಪಟ್ಟಣದಲ್ಲಿ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆಯಾಗಿ ಕೊಳವೆ ಬಾವಿಗಳ ಮೂಲಕ ಪ್ರತಿ ವಾರ್ಡಿನಲ್ಲಿ ಎರಡು ಮೂರರಂತೆ ಜಲ ಕುಂಭಗಳನ್ನು ಪಟ್ಟಣ ಪಂಚಾಯಿತಿಯವರು ವ್ಯವಸ್ಥೆ ಮಾಡಿದ್ದಾರೆ. <br /> <br /> ಆದರೆ ಕೊಳವೆ ಬಾವಿಗಳ ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು ಅವುಗಳಲ್ಲಿ ನೀರು ಬರದಂತಾಗಿದೆ. ಹೀಗಾಗಿ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರವೆದ್ದಿದೆ. <br /> <br /> ಈ ನಿಟ್ಟಿನಲ್ಲಿ ವಿವೇಕರಾವ್ ಪಾಟೀಲರ ನೇತೃತ್ವದಲ್ಲಿ ಮುಂಜಾಗ್ರತೆಯಾಗಿ ನೀರಿನ ಸಂಗ್ರಹ ಪರೀಕ್ಷಿಸಿ ಪಟ್ಟಣದಲ್ಲಿ 17ನೂತನ ಕೊಳವೆ ಬಾವಿಗಳನ್ನು ಕೊರೆಯಲು ನಿರ್ಧರಿಸಲಾಗಿದೆ. ಇವುಗಳಲ್ಲಿ ಈಗಾಗಲೇ 3-4 ಕಡೆಗೆ ಕೊರೆಸಿದ್ದು ಅಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಬಂದಿವೆ. ಈ ಕೊಳವೆ ಬಾವಿಗಳ ಮೂಲಕ ನಾಗರಿಕರಿಗೆ ಟ್ಯಾಂಕರ್ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ.<br /> <br /> ಟ್ಯಾಂಕರ್ಗಳ ನೀರನ್ನು ವಿತರಿಸುವಾಗ ನೀರಿನ ರಾಜಕೀಯ ಮಾಡುತ್ತಿದ್ದಾರೆ. ಅವಶ್ಯಕತೆ ಇದ್ದಲ್ಲಿ ಸರಿಯಾಗಿ ನೀರನ್ನೇ ಹಾಕುವುದಿಲ್ಲ. ಪ್ರಭಾವಿಗಳ ಮನೆ ಮನೆಗೆ ಹೋಗಿ ಅಂತವರ ಟ್ಯಾಂಕರ್ಗಳಿಗೆ ನೀರನ್ನು ತುಂಬಿಸಿ ಬರುತ್ತಿದ್ದಾರೆಂದು ಸಾರ್ವಜನಿಕರು ಅಪಾದಿಸಿದ್ದಾರೆ. <br /> <br /> ಇನ್ನು ಕೆಲವರು ಟ್ಯಾಂಕರ್ಗಳ ಬೆನ್ನತ್ತಿ ತಮಗೆ ಬೇಕಾದವರ ಮನೆಗಳಿಗೆ ನೀರನ್ನು ತುಂಬಿಸಿ ಬರುತ್ತಿದ್ದಾರೆ. ಮೂರನೆಯ ವಾರ್ಡಿನಲ್ಲಿ ನೀರನ್ನೇ ಕೊಡುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳ ಪರವಾಗಿ ಶಂಕರ ಲಠ್ಠೆ ದೂರಿದ್ದಾರೆ.<br /> <br /> ಶೀಘ್ರವೇ ಕುಡಿಯುವ ನೀರಿಗೆ ಕ್ರಮ: ಇದೇ ರೀತಿ ಮಳೆಯಾಗದೆ ಹೋದರೆ ಪರಿಸ್ಥಿತಿ ಗಂಭಿರವಾಗಲಿದೆ ಎಂದು ತಿಳಿಸಿರುವ ಶಾಸಕ ದುರ್ಯೋಧನ ಐಹೊಳೆ ಪಟ್ಟಣ ಪ್ರದೇಶದ ಜನತೆಗಾಗಿ ಕುಡಿಯುವ ನೀರಿಗಾಗಿ ಸರ್ಕಾರದಿಂದ ವಿಶೇಷ ಅನುದಾನ ಮಂಜೂರ ಮಾಡಿಸಿಕೊಡುವ ಭರವಸೆ ನೀಡಿದ್ದಾರೆ.<br /> <br /> ಅವಶ್ಯಕತೆಗೆ ಅನುಗುಣವಾಗಿ ಕೊಳವೆ ಬಾವಿ ಕೊರೆಯುವುದು, ಇದ್ದಕೊಳವೆ ಬಾವಿಗಳನ್ನು ಆಳ ಮಾಡಿಸುವುದು. ಕೊಳವೆ ಬಾವಿಗಳಿಂದ ಪೈಪ್ಲೈನ್ ಮಾಡಿಸಿ ಕುಡಿಯುವ ನೀರಿನ ಸರಬರಾಜಿಗೆ ಶುಕ್ರವಾರ ಪಟ್ಟಣದಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗುವುದು ಎಂದ ಶಾಸಕರು ತಿಳಿಸಿದ್ದಾರೆ. <br /> <br /> ಚಿಂಚಲಿ ರಸ್ತೆಯ ಜನತೆಗಾಗಿ ಒಂದು ಕೊಳವೆ ಬಾವಿ ಕೊರೆಸಿ ನೀರು ಸರಬರಾಜು ಮಾಡುವಂತೆ ಅಲ್ಲಿನ ನಾಗರಿಕರು ಶಾಸಕರಲ್ಲಿ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಬಾಗ: ಕುಡಿಯುವ ನೀರಿನ ಮೂಲವಾಗಿದ್ದ ಹುಲ್ಯಾಳ ಕೆರೆ ಬತ್ತಿ ಹೋದ ಕಾರಣ ಪಟ್ಟಣದಲ್ಲಿ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆಯಾಗಿ ಕೊಳವೆ ಬಾವಿಗಳ ಮೂಲಕ ಪ್ರತಿ ವಾರ್ಡಿನಲ್ಲಿ ಎರಡು ಮೂರರಂತೆ ಜಲ ಕುಂಭಗಳನ್ನು ಪಟ್ಟಣ ಪಂಚಾಯಿತಿಯವರು ವ್ಯವಸ್ಥೆ ಮಾಡಿದ್ದಾರೆ. <br /> <br /> ಆದರೆ ಕೊಳವೆ ಬಾವಿಗಳ ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು ಅವುಗಳಲ್ಲಿ ನೀರು ಬರದಂತಾಗಿದೆ. ಹೀಗಾಗಿ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರವೆದ್ದಿದೆ. <br /> <br /> ಈ ನಿಟ್ಟಿನಲ್ಲಿ ವಿವೇಕರಾವ್ ಪಾಟೀಲರ ನೇತೃತ್ವದಲ್ಲಿ ಮುಂಜಾಗ್ರತೆಯಾಗಿ ನೀರಿನ ಸಂಗ್ರಹ ಪರೀಕ್ಷಿಸಿ ಪಟ್ಟಣದಲ್ಲಿ 17ನೂತನ ಕೊಳವೆ ಬಾವಿಗಳನ್ನು ಕೊರೆಯಲು ನಿರ್ಧರಿಸಲಾಗಿದೆ. ಇವುಗಳಲ್ಲಿ ಈಗಾಗಲೇ 3-4 ಕಡೆಗೆ ಕೊರೆಸಿದ್ದು ಅಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಬಂದಿವೆ. ಈ ಕೊಳವೆ ಬಾವಿಗಳ ಮೂಲಕ ನಾಗರಿಕರಿಗೆ ಟ್ಯಾಂಕರ್ಗಳ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ.<br /> <br /> ಟ್ಯಾಂಕರ್ಗಳ ನೀರನ್ನು ವಿತರಿಸುವಾಗ ನೀರಿನ ರಾಜಕೀಯ ಮಾಡುತ್ತಿದ್ದಾರೆ. ಅವಶ್ಯಕತೆ ಇದ್ದಲ್ಲಿ ಸರಿಯಾಗಿ ನೀರನ್ನೇ ಹಾಕುವುದಿಲ್ಲ. ಪ್ರಭಾವಿಗಳ ಮನೆ ಮನೆಗೆ ಹೋಗಿ ಅಂತವರ ಟ್ಯಾಂಕರ್ಗಳಿಗೆ ನೀರನ್ನು ತುಂಬಿಸಿ ಬರುತ್ತಿದ್ದಾರೆಂದು ಸಾರ್ವಜನಿಕರು ಅಪಾದಿಸಿದ್ದಾರೆ. <br /> <br /> ಇನ್ನು ಕೆಲವರು ಟ್ಯಾಂಕರ್ಗಳ ಬೆನ್ನತ್ತಿ ತಮಗೆ ಬೇಕಾದವರ ಮನೆಗಳಿಗೆ ನೀರನ್ನು ತುಂಬಿಸಿ ಬರುತ್ತಿದ್ದಾರೆ. ಮೂರನೆಯ ವಾರ್ಡಿನಲ್ಲಿ ನೀರನ್ನೇ ಕೊಡುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳ ಪರವಾಗಿ ಶಂಕರ ಲಠ್ಠೆ ದೂರಿದ್ದಾರೆ.<br /> <br /> ಶೀಘ್ರವೇ ಕುಡಿಯುವ ನೀರಿಗೆ ಕ್ರಮ: ಇದೇ ರೀತಿ ಮಳೆಯಾಗದೆ ಹೋದರೆ ಪರಿಸ್ಥಿತಿ ಗಂಭಿರವಾಗಲಿದೆ ಎಂದು ತಿಳಿಸಿರುವ ಶಾಸಕ ದುರ್ಯೋಧನ ಐಹೊಳೆ ಪಟ್ಟಣ ಪ್ರದೇಶದ ಜನತೆಗಾಗಿ ಕುಡಿಯುವ ನೀರಿಗಾಗಿ ಸರ್ಕಾರದಿಂದ ವಿಶೇಷ ಅನುದಾನ ಮಂಜೂರ ಮಾಡಿಸಿಕೊಡುವ ಭರವಸೆ ನೀಡಿದ್ದಾರೆ.<br /> <br /> ಅವಶ್ಯಕತೆಗೆ ಅನುಗುಣವಾಗಿ ಕೊಳವೆ ಬಾವಿ ಕೊರೆಯುವುದು, ಇದ್ದಕೊಳವೆ ಬಾವಿಗಳನ್ನು ಆಳ ಮಾಡಿಸುವುದು. ಕೊಳವೆ ಬಾವಿಗಳಿಂದ ಪೈಪ್ಲೈನ್ ಮಾಡಿಸಿ ಕುಡಿಯುವ ನೀರಿನ ಸರಬರಾಜಿಗೆ ಶುಕ್ರವಾರ ಪಟ್ಟಣದಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗುವುದು ಎಂದ ಶಾಸಕರು ತಿಳಿಸಿದ್ದಾರೆ. <br /> <br /> ಚಿಂಚಲಿ ರಸ್ತೆಯ ಜನತೆಗಾಗಿ ಒಂದು ಕೊಳವೆ ಬಾವಿ ಕೊರೆಸಿ ನೀರು ಸರಬರಾಜು ಮಾಡುವಂತೆ ಅಲ್ಲಿನ ನಾಗರಿಕರು ಶಾಸಕರಲ್ಲಿ ಮನವಿ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>