ರಾಮಾಯಣದಲ್ಲಿ ಹಂಪಿಯ ಕಿಷ್ಕಿಂದೆ, ಅಂಜನಾದ್ರಿ ಬೆಟ್ಟ, ಪಂಪಾ ಸರೋವರ, ರಘುನಾಥ ಮಾಲ್ಯವಂತ ಪರ್ವತ, ಸುಗ್ರೀವ ಗುಹೆ, ಸೀತೆಯ ಸೆರಗು, ಋಷಿಮುಖ ಪರ್ವತದ ಉಲ್ಲೇಖವಿದೆ. ರಾಮ–ಲಕ್ಷ್ಮಣ ಓಡಾಡಿದ ಪವಿತ್ರ ಜಾಗ ಎನ್ನುವುದು ಭಕ್ತರ ನಂಬಿಕೆ. ಈ ಸ್ಥಳಗಳನ್ನು ಕಣ್ತುಂಬಿಕೊಳ್ಳುವುದಕ್ಕಾಗಿಯೇ ನಿತ್ಯವೂ ವಿವಿಧ ಕಡೆಗಳಿಂದ ನೂರಾರು ಜನ ಬಂದು ಹೋಗುತ್ತಾರೆ.