ವಿಠಲ ದೇಗುಲ ಮಾರ್ಗದಲ್ಲಿ ಹರೇ ಶಂಕರ ಮಂಟಪ ಬರುತ್ತದೆ. ಬಸ್ ಸೇರಿದಂತೆ ಇತರೆ ದೊಡ್ಡ ವಾಹನಗಳು ಸಂಚರಿಸಿದಾಗ ಮಂಟಪಕ್ಕೆ ಧಕ್ಕೆಯಾಗುತ್ತಿತ್ತು. ಇತ್ತೀಚೆಗೆ ಬಸ್ಸೊಂದು ಮಂಟಪದಲ್ಲಿ ಸಿಲುಕಿಕೊಂಡು ಅದಕ್ಕೆ ಧಕ್ಕೆಯಾಗಿತ್ತು. ಪದೇ ಪದೇ ಈ ರೀತಿಯ ಘಟನೆ ಆಗುತ್ತಿದ್ದು, ಅದನ್ನು ತಡೆಯಲು ಮಂಟಪಕ್ಕೂ ಮೊದಲು ಕಮಾನು ಮಾಡಿಸಿದೆ. ಈಗ ದೊಡ್ಡ ವಾಹನಗಳ ಸಂಚಾರಕ್ಕೆ ತಡೆ ಬಿದ್ದಂತಾಗಿದೆ.