ಶಾಲೆಯ ಹಳೆ ವಿದ್ಯಾರ್ಥಿಗಳು, ಶಿಕ್ಷಣಪ್ರೇಮಿಗಳ ನೆರವಿನಿಂದ ಎಲ್ಲರೂ ಅಚ್ಚರಿ ಪಡುವಂತೆ ಶಾಲೆ ಬದಲಾಗಿದೆ. ಹೊಸ ಶೈಕ್ಷಣಿಕ ವರ್ಷ ಪ್ರಾರಂಭಕ್ಕೆ ಸಜ್ಜುಗೊಂಡಿದೆ. ಈ ಶಾಲೆಯಲ್ಲಿ ಓದಿ ಶಿಕ್ಷಕರಾಗಿರುವ ಕೊಟ್ರೇಶ ಹಿರೇಮಠ, ಆರ್.ಬಿ.ಗುರುಬಸವರಾಜ, ಕನ್ನಿಹಳ್ಳಿ ಇಸ್ಮಾಯಿಲ್ ಹಾಗೂ ಗೆಳೆಯರ ಕಾಳಜಿ, ಭಿನ್ನ ಯೋಚನೆಯಿಂದ ಶಾಲೆ ಬದಲಾಗಿದೆ. ಗ್ರಾಮಸ್ಥರು ಶಾಲೆಯ ಅಂದ ಹೆಚ್ಚಿಸಲು ಉದಾರ ದೇಣಿಗೆ ನೀಡಿದ್ದಾರೆ. ಸದ್ಯ ₹1.50 ಲಕ್ಷ ಸಂಗ್ರಹವಾಗಿದ್ದು, ಶಾಲೆಯ ಚಿತ್ರಣ ಬದಲಾಗಿದ್ದನ್ನು ಕಂಡು ಕೆಲವರು ಸ್ವಯಂ ಪ್ರೇರಣೆಯಿಂದ ದೇಣಿಗೆ ಕೊಡಲು ಮುಂದಾಗಿದ್ದಾರೆ.