ಬೆಂಗಳೂರು ರಸ್ತೆ, ತೇರು ಬಜಾರು, ಕಪ್ಪಗಲ್ಲು ರಸ್ತೆ, ಗಾಂಧಿನಗರ ಸೇರಿದಂತೆ ವಿವಿಧೆಡೆ ಅಂಗಡಿಗಳು ಮಧ್ಯಾಹ್ನದವರೆಗೂ ಮುಚ್ಚಿದ್ದವು. ಹಣ್ಣು, ತರಕಾರಿ ಮಾರಾಟಕ್ಕೆ, ವಾಹನಗಳ ಸಂಚಾರಕ್ಕೆ ಬೆಳಿಗ್ಗೆಯಿಂದಲೂ ತಡೆ ಇರಲಿಲ್ಲ. ಆದರೆ ಮಳೆಯ ಕಾರಣದಿಂದಾಗಿ ಜನ ಹೊರಗೆ ಬಾರದೆ ತೆರೆದ ಅಂಗಡಿಗಳಲ್ಲಿ ವರ್ತಕರು ಗ್ರಾಹಕರಿಗಾಗಿ ಕಾಯುತ್ತಿದ್ದರು.