ಗ್ರಾಮದ ನಿವಾಸಿ ಬಾಲಾಜಿ (13) ಮೃತ ಬಾಲಕ. ಬಾಲಾಜಿ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಶಾಲೆಯ ಅವಧಿಯ ನಂತರ ತಮ್ಮ ಪಾಲಕರು ಇರುವ ಜಮೀನಿಗೆ ಮಧ್ಯಾಹ್ನ ತೆರಳಿದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಮೃತ ಬಾಲಕನ ಮನೆಗೆ ತಹಶೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ, ಸಿಡಿಪಿಒ ಎ.ಜಲಾಲಪ್ಪ, ತೆಕ್ಕಲಕೋಟೆ ಸಿಪಿಐ ಕಾಳಿಕೃಷ್ಣ ಭೇಟಿ ನೀಡಿದರು. ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.