‘ಸಿಂಗ್ ವಿರುದ್ಧ ಕೋರ್ಟ್ನಲ್ಲಿ ಹಲವು ಕ್ರಿಮಿನಲ್ ಕೇಸ್ಗಳಿವೆ. ಅದಕ್ಕಾಗಿ ಅವರು ಬಿಜೆಪಿ ಸೇರಿದ್ದಾರೆ. 11 ತಿಂಗಳು ಬೆಂಗಳೂರಿನಲ್ಲಿದ್ದು, ಕೋರ್ಟ್ಗೆ ಅಲೆಯುವುದೇ ಅವರ ಕೆಲಸ. ಒಂದು ತಿಂಗಳು ಹೊಸಪೇಟೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಮುಸ್ಲಿಮರು, ವಾಲ್ಮೀಕಿ ನಾಯಕರ ಬಳಿ ಹೋಗಿ ಸಹೋದರರು ಎಂದು ನಾಟಕವಾಡುತ್ತಾರೆ. ಮತ್ತೊಂದು ಕಡೆ ಅವರನ್ನೇ ಕಿಡಿಗೇಡಿಗಳು ಎಂದು ಜರಿಯುತ್ತಾರೆ’ ಎಂದು ತರಾಟೆಗೆ ತೆಗೆದುಕೊಂಡರು.