ಹೊಸಪೇಟೆ: ವಿದೇಶದಿಂದ ಹಿಂತಿರುಗಿರುವ ಎಂಟು ಜನರನ್ನು ಜಿಲ್ಲಾಡಳಿತವು ಗೃಹಬಂಧನದಲ್ಲಿ ಇರಿಸಿದೆ.
ಆಸ್ಟ್ರೇಲಿಯಾ, ದುಬೈ ಹಾಗೂ ಒಮನ್ನಿಂದ ತಲಾ ಇಬ್ಬರು ಸಂಡೂರಿಗೆ ಹಿಂತಿರುಗಿದರೆ, ಹಗರಿಬೊಮ್ಮನಹಳ್ಳಿಗೆ ಆಸ್ಟ್ರೇಲಿಯಾ ಹಾಗೂ ದುಬೈನಿಂದ ಕೂಡ್ಲಿಗಿಗೆ ಬಂದಿರುವ ತಲಾ ಒಬ್ಬರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.
ಎರಡು ವಾರ ಮನೆ ಬಿಟ್ಟು ಹೋಗದಂತೆ ಸೂಚಿಸಲಾಗಿದೆ. ಅವರ ಮೇಲೆ ನಿಗಾ ಇಡಲು ತಹಶೀಲ್ದಾರ್ಗಳಿಗೆ ನಿರ್ದೇಶನ ನೀಡಲಾಗಿದೆ.