ಹೊಸಪೇಟೆ: ಇಲ್ಲಿಗೆ ಸಮೀಪದ ತುಂಗಭದ್ರಾ ಜಲಾಶಯದ ಒಳಹರಿವು ಬುಧವಾರ ಭಾರಿ ಹೆಚ್ಚಳವಾಗಿದೆ.
89,132 ಕ್ಯುಸೆಕ್ ಒಳಹರಿವು ಇದೆ. ಒಟ್ಟು 33 ಕ್ರಸ್ಟ್ಗೇಟ್ಗಳ ಪೈಕಿ 20 ತೆರೆದು ನದಿಗೆ ನೀರು ಬಿಡಲಾಗುತ್ತಿದೆ. ಮಂಗಳವಾರ 54,500 ಕ್ಯುಸೆಕ್ ಒಳಹರಿವು ಇತ್ತು.
87,148 ಕ್ಯುಸೆಕ್ ನೀರು ನದಿಗೆ ಹರಿಸಲಾಗುತ್ತಿದ್ದು, ಬುಧವಾರ ನದಿಯಲ್ಲಿ ನೀರು ಇಳಿಮುಖ ಕಂಡಿದೆ. ಮಂಗಳವಾರ 88,069 ಕ್ಯುಸೆಕ್ ನೀರು ನದಿಗೆ ಹರಿಸಲಾಗಿತ್ತು. ಸೋಮವಾರ ಒಂದು ಲಕ್ಷ ಕ್ಯುಸೆಕ್ಗೂ ಅಧಿಕ ನೀರು ಹರಿಸಲಾಗಿತ್ತು. ಇದರಿಂದಾಗಿ ಹಂಪಿ ಸ್ಮಾರಕಗಳು ಮುಳುಗಿದ್ದವು. ಈಗ ನದಿಯಲ್ಲಿ ನೀರಿನ ಪ್ರಮಾಣ ತಗ್ಗಿದ್ದರಿಂದ ಸ್ಮಾರಕಗಳು ಗೋಚರಿಸುತ್ತಿವೆ. ಕಂಪ್ಲಿ–ಗಂಗಾವತಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆ ಭೀತಿ ದೂರವಾಗಿದೆ.
1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1,632.38 ಅಡಿ ನೀರಿನ ಸಂಗ್ರಹವಿದೆ. ತುಂಗಾ ಜಲಾಶಯದಿಂದ 11,179 ಕ್ಯುಸೆಕ್, ಭದ್ರಾದಿಂದ 14,038 ಕ್ಯುಸೆಕ್ ನೀರು ಅಣೆಕಟ್ಟೆಗೆ ಹರಿದು ಬರುತ್ತಿದೆ. ಆದರೆ, ಜಲಾನಯನ ಪ್ರದೇಶದಲ್ಲಿ ಮಳೆ ನಿಂತಿದೆ. ಬರುವ ದಿನಗಳಲ್ಲಿ ಒಳಹರಿವು ಸಂಪೂರ್ಣ ತಗ್ಗಲಿದೆ ಎಂದು ಜಲಾಶಯ ಆಡಳಿತ ಮಂಡಳಿ ಎಂಜಿನಿಯರ್ ವಿಶ್ವನಾಥ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.