‘ಕಾಗಿನೆಲೆ ಧರ್ಮಪೀಠ ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಸ್ಥಾಪಿತವಾಗಿದೆ. ಮೊದಲ ಪೀಠಾಧಿಪತಿಯನ್ನು ಮುಸ್ಲಿಮರು, ವೀರಶೈವರು, ಬ್ರಾಹ್ಮಣರು, ವಾಲ್ಮೀಕಿ ಸಮಾಜದವರು ಪಲ್ಲಕ್ಕಿಯಲ್ಲಿ ಹೊತ್ತು ಮೆರೆಸಿದ್ದಾರೆ. ಕುರುಬ ಸಮುದಾಯ ಈ ಮಹತ್ವವನ್ನು ಅರಿತು ತಮ್ಮ ನಡವಳಿಕೆಗಳನ್ನು ತಿದ್ದಿಕೊಳ್ಳಬೇಕು. ಅನ್ಯ ಜಾತಿ, ಧರ್ಮ, ಭಾಷಿಕರ ಜತೆ ಅನ್ಯೋನ್ಯವಾಗಿ ಬೆರೆತು ಸಾಮರಸ್ಯವನ್ನು ಗಟ್ಟಿಗೊಳಿಸಬೇಕು’ ಎಂದು ತಿಳಿಸಿದರು.