ಅಂದಹಾಗೆ, ಗಾಂಧಿ ಬಂದು ಹೋದ ನಂತರ ಆ ಕೊಠಡಿ ಹೋರಾಟದ ಕೇಂದ್ರವಾಗಿಯೂ ಬದಲಾಯಿತು. ಬಳಿಕ ಅನ್ಯ ಭಾಗಗಳಿಗೂ ವಿಸ್ತರಣೆಗೊಂಡಿತು. 1930ರಲ್ಲಿ ಮದ್ಯಪಾನ ನಿಷೇಧ ಚಳವಳಿ ನಡೆಯಿತು. ಚಳವಳಿ ನೇತೃತ್ವ ವಹಿಸಿದ್ದ ವಸುಪಾಲಪ್ಪ, ಟಿ.ಬಿ.ಕೇಶವರಾಯ ಸೇರಿದಂತೆ 30 ಜನರನ್ನು ಕಂಚಿಕೇರಿಯಲ್ಲಿ ಬಂಧಿಸಲಾಗಿತ್ತು. 1932ರ ಆ.15ರಂದು ತೊಗರಿಕಟ್ಟೆ, ಕಣವಿಹಳ್ಳಿಯಲ್ಲಿ ಈಚಲು ಗಿಡ ಕಡಿದು ಹೋರಾಟ ಮಾಡಿದವರನ್ನು ಬ್ರಿಟಿಷರು ವಶಕ್ಕೆ ಪಡೆದಿದ್ದರು. ಸ್ವಾತಂತ್ರ್ಯ ಹೋರಾಟಗಾರರಾದ ಡಾ.ಬಾಬುರಾಜೇಂದ್ರ ಪ್ರಸಾದ, ಗಂಗಾಧರ ರಾವ್ ದೇಶಪಾಂಡೆ ಅವರು ಸಹ ಬರಗಾಲ ನಿಧಿ ಸಂಗ್ರಹಕ್ಕೆ ಇಲ್ಲಿಗೆ ಬಂದಿದ್ದರು.