ಹೊಸಪೇಟೆ (ವಿಜಯನಗರ): ವೀರಶೈವ ವಿದ್ಯಾವರ್ಧಕ ಸಂಘದ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನ (ಪಿಡಿಐಟಿ) ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಪಲ್ಲೇದ ದೊಡ್ಡಪ್ಪ ಗುರುವಾರ ಅಧಿಕಾರ ಸ್ವೀಕರಿಸಿದರು.
ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಕೋರಿ ವಿರೂಪಾಕ್ಷಪ್ಪ, ಶರಣ ಸ್ವಾಮಿ, ರಾಜಶೇಖರ ಮುಲಾಲಿ, ಕೋರಿಶೆಟ್ರ ಲಿಂಗಪ್ಪ, ಸಾಲಿ ಸಿದ್ದಯ್ಯ ಸ್ವಾಮಿ, ಪ್ರಾಚಾರ್ಯ ಎಸ್.ಎಂ. ಶಶಿಧರ, ಪ್ರಾಧ್ಯಾಪಕಿ ಶರಣಬಸಮ್ಮ, ರವಿ ಕುಮಾರ್ ಅವರು ಪಲ್ಲೇದ ದೊಡ್ಡಪ್ಪ ಅವರನ್ನು ಸತ್ಕರಿಸಿ ಶುಭ ಕೋರಿದರು.
ಲಸಿಕೆ:ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 250ಕ್ಕೂ ಹೆಚ್ಚು ಜನರು ಗುರುವಾರ ಲಸಿಕೆ ಪಡೆದರು. ಕಾಲೇಜಿನ ಕೋರಿಕೆಯ ಮೇರೆಗೆ ಆರೋಗ್ಯ ಇಲಾಖೆಯು ಲಸಿಕೆಗೆ ವ್ಯವಸ್ಥೆ ಮಾಡಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.