<p><strong>ಹೊಸಪೇಟೆ: </strong>‘ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದಲ್ಲದೇ ಅದನ್ನು ಬೆಂಬಲಿಸಬೇಕೆಂದು ಆಳುವ ಪಕ್ಷವು ಹಿಂದೂಗಳನ್ನು ಪ್ರಚೋದಿಸುತ್ತಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಭಾರತದ ಏಕತೆಗೆ ಧಕ್ಕೆ ಉಂಟಾಗಲಿದೆ’ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಆತಂಕ ವ್ಯಕ್ತಪಡಿಸಿದ್ದಾರೆ.</p>.<p>‘ಈ ಕಾಯ್ದೆಯು ಭಾರತದ ಸಂವಿಧಾನದ ಆಶಯಕ್ಕೆ ವ್ಯತಿರಿಕ್ತವಾಗಿದೆ. ಇದು ಪ್ರತಿಭಟನೆಗೆ ಅರ್ಹವಾಗಿದೆ. ಭಾರತೀಯ ಪ್ರಜೆಗಳ ನಡುವೆಯೇ ಭಿನ್ನಾಭಿಪ್ರಾಯ ಉಂಟು ಮಾಡುವ ಈ ಕಾಯ್ದೆ ಏಕತೆಗೆ ವಿರುದ್ಧವಾಗಿದೆ. ಎಲ್ಲಾ ಭಾರತೀಯ ಪ್ರಜೆಗಳು ಜಾತಿ, ಮತ, ಭೇದ ಮರೆತು ವಿರೋಧಿಸಬೇಕು’ ಎಂದು ಮನವಿ ಮಾಡಿದ್ದಾರೆ.</p>.<p>‘ಭಾರತದಲ್ಲಿನ ಎಲ್ಲಾ ಮುಸಲ್ಮಾನರು ಸಹ ಈ ದೇಶದ ಪ್ರಜೆಗಳೇ. ಅವರನ್ನು ಅವಮಾನಿಸುವುದು ತರವಲ್ಲ. ಇದು ಈಶಾನ್ಯ ರಾಜ್ಯಗಳ ಜನರ ಸಂಸ್ಕೃತಿಯ ಮೇಲೆ ನಡೆಸಿದ ನೇರ ದಾಳಿ. ಪಶ್ಚಿಮ ಬಂಗಾಳದ ಜನರು ಪೂರ್ವ ಬಂಗಾಳದವರೇ ಅಥವಾ ಸ್ಥಳೀಯರೇ ಎಂಬ ಶಂಕೆ ಹುಟ್ಟಿಸಿದೆ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ: </strong>‘ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದಲ್ಲದೇ ಅದನ್ನು ಬೆಂಬಲಿಸಬೇಕೆಂದು ಆಳುವ ಪಕ್ಷವು ಹಿಂದೂಗಳನ್ನು ಪ್ರಚೋದಿಸುತ್ತಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಭಾರತದ ಏಕತೆಗೆ ಧಕ್ಕೆ ಉಂಟಾಗಲಿದೆ’ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಆತಂಕ ವ್ಯಕ್ತಪಡಿಸಿದ್ದಾರೆ.</p>.<p>‘ಈ ಕಾಯ್ದೆಯು ಭಾರತದ ಸಂವಿಧಾನದ ಆಶಯಕ್ಕೆ ವ್ಯತಿರಿಕ್ತವಾಗಿದೆ. ಇದು ಪ್ರತಿಭಟನೆಗೆ ಅರ್ಹವಾಗಿದೆ. ಭಾರತೀಯ ಪ್ರಜೆಗಳ ನಡುವೆಯೇ ಭಿನ್ನಾಭಿಪ್ರಾಯ ಉಂಟು ಮಾಡುವ ಈ ಕಾಯ್ದೆ ಏಕತೆಗೆ ವಿರುದ್ಧವಾಗಿದೆ. ಎಲ್ಲಾ ಭಾರತೀಯ ಪ್ರಜೆಗಳು ಜಾತಿ, ಮತ, ಭೇದ ಮರೆತು ವಿರೋಧಿಸಬೇಕು’ ಎಂದು ಮನವಿ ಮಾಡಿದ್ದಾರೆ.</p>.<p>‘ಭಾರತದಲ್ಲಿನ ಎಲ್ಲಾ ಮುಸಲ್ಮಾನರು ಸಹ ಈ ದೇಶದ ಪ್ರಜೆಗಳೇ. ಅವರನ್ನು ಅವಮಾನಿಸುವುದು ತರವಲ್ಲ. ಇದು ಈಶಾನ್ಯ ರಾಜ್ಯಗಳ ಜನರ ಸಂಸ್ಕೃತಿಯ ಮೇಲೆ ನಡೆಸಿದ ನೇರ ದಾಳಿ. ಪಶ್ಚಿಮ ಬಂಗಾಳದ ಜನರು ಪೂರ್ವ ಬಂಗಾಳದವರೇ ಅಥವಾ ಸ್ಥಳೀಯರೇ ಎಂಬ ಶಂಕೆ ಹುಟ್ಟಿಸಿದೆ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>