‘ಮರಿಯಮ್ಮನಹಳ್ಳಿವರಾದ ಚಿದಾನಂದ ಶನಿವಾರ ಎಪಿಎಂಸಿಯಲ್ಲಿ ಲೋಡ್ ಇಳಿಸಿ, ರಾತ್ರಿ ಅಲ್ಲಿಯೇ ಮಲಗಿದ್ದಾರೆ. ತಡರಾತ್ರಿ 3ರಿಂದ 4 ಗಂಟೆಯ ನಡುವೆ ಯಾರೊ ಅವರ ತಲೆಯ ಮೇಲೆ ಕಲ್ಲು ಹಾಕಿದ್ದಾರೆ. ತೀವ್ರ ರಕ್ತಸ್ರಾವವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ಸಹೋದರ ಮಹಾಲಿಂಗ ಕೊಟ್ಟಿರುವ ದೂರಿನ ಮೇರೆಗೆ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ’ ಎಂದು ಟಿ.ಬಿ. ಡ್ಯಾಂ ಸಿಪಿಐ ಎ. ನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.