‘ರಸಗೊಬ್ಬರಗಳಲ್ಲಿನ ರಂಜಕ, ಗಂಧಕ, ಸಾರಜನಕ ಹಾಗೂ ಕೈಗಾರಿಕೆಗಳ ತ್ಯಾಜ್ಯದಿಂದ ಸಯಾನೋ ಬ್ಯಾಕ್ಟಿರಿಯಾ ಹುಟ್ಟುಕೊಳ್ಳುತ್ತದೆ. ಮೋಡ ಕವಿದ ವಾತಾವರಣದ ನಡುವೆ ಆಗಾಗ ಬಿರು ಬಿಸಿಲಿನಿಂದ ಅದರ ಉತ್ಪತ್ತಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಈ ನೀರನ್ನು ಜನ, ಜಾನುವಾರು, ಪಕ್ಷಿಗಳು ನೇರವಾಗಿ ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ನೀರಿಗಿಳಿದರೆ ಚರ್ಮರೋಗವೂ ತಗುಲಬಹುದು’ ಎಂದು ಪರಿಸರ, ವನ್ಯಜೀವಿ ತಜ್ಞ ಸಮದ್ ಕೊಟ್ಟೂರು ತಿಳಿಸಿದರು.