‘ಶಿವಕುಮಾರ ಸ್ವಾಮೀಜಿ ಅವರು ಬಡವರು, ನಿರ್ಗತಿಕರು ಸೇರಿದಂತೆ ಎಲ್ಲಾ ವರ್ಗದವರಿಗೆ ಅವರ ಮಠದಲ್ಲಿ ಆಶ್ರಯ ನೀಡಿ, ನಿತ್ಯ ಸಾವಿರಾರು ಜನರಿಗೆ ದಾಸೋಹ ಮಾಡಿ ಮನೆ ಮಾತಾಗಿದ್ದಾರೆ. ಅವರ ಹೆಸರು ಕ್ಯಾಂಟೀನ್ಗೆ ಇಟ್ಟರೆ ಬಹಳ ಸೂಕ್ತ. ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಿ ಮುಂದುವರೆಯಬೇಕು. ಯಾರದೋ ಒತ್ತಡಕ್ಕೆ ಒಳಗಾಗಿ ತಲೆಬಾಗಬಾರದು’ ಎಂದು ಆಗ್ರಹಿಸಿದ್ದಾರೆ.