<p><strong>ಬೆಂಗಳೂರು:</strong> ಕಲೆ, ಸಾಹಿತ್ಯ ಮತ್ತು ರಂಗಭೂಮಿಯನ್ನು ವಸ್ತುನಿಷ್ಠವಾಗಿ ಹಾಗೂ ಗಂಭೀರವಾಗಿ ವಿಮರ್ಶಿಸುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಜಾಫೆಟ್ ಅಭಿಪ್ರಾಯಪಟ್ಟರು.</p>.<p>ದೇಸಿ ರಂಗತಂಡ, ಭೂಮಿ ಕಲಾ ಅಧ್ಯಯನ ಕೇಂದ್ರ ಹಾಗೂ ಅನ್ವೇಷಣಾ ವೇದಿಕೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>‘ರಂಗಭೂಮಿ, ಸಾಹಿತ್ಯ ಹಾಗೂ ಕಲಾಕ್ಷೇತ್ರದ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರುವವರು ವಿಮರ್ಶೆ ಮಾಡುವಂತಾಗಬೇಕು. ಇವುಗಳ ವಿಮರ್ಶೆಗೆ ಪಠ್ಯ ನಿರೂಪಣೆ ಮಾಡುವ ಕೆಲಸಕ್ಕೆ ನಮ್ಮ ವಿಶ್ವವಿದ್ಯಾಲಯ ವೇದಿಕೆ ಆಗಲಿದೆ’ ಎಂದರು.</p>.<p>ರಂಗ ವಿಮರ್ಶಕ ಡಾ.ಎ.ಆರ್.ಗೋವಿಂದಸ್ವಾಮಿ, ‘ವಿಮರ್ಶೆ ಕೇವಲ ಕೃತಿಯ ನಿಯಂತ್ರಣ ಕೆಲಸವನ್ನಷ್ಟೇ ಮಾಡದೆ, ಅದಕ್ಕೆ ಪೂರಕವಾದ ಇನ್ನೊಂದು ಪ್ರತಿಕೃತಿ ರೂಪಿಸು<br /> ವಂತಾಗಬೇಕು. ಹೊಸ ಹೊಳಹುಗಳನ್ನು ನೀಡಬೇಕು. ಇಂತಹ ಕಲಾ ವಿಭಾಗಗಳಿಗೆ ಪ್ರತ್ಯೇಕ ವಿದ್ವಾಂಸರು, ವಿಮರ್ಶಕರು ಇಲ್ಲದ್ದು ಶೋಚನೀಯ. ವಿಮರ್ಶೆಯಿಂದಲೇ ಬದುಕು ಕಟ್ಟಿಕೊಳ್ಳುತ್ತೇನೆ ಎಂಬ ವಾತಾವರಣ ಸೃಷ್ಟಿಯಾಗಬೇಕು’ ಎಂದು ಹೇಳಿದರು.</p>.<p>ರಂಗವಿಮರ್ಶೆಯ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಜಿ.ಎನ್.ರಂಗನಾಥರಾವ್, ‘ಇಂದು ಸಾಂಸ್ಕೃತಿಕ ಬಿಕ್ಕಟ್ಟು ನಿರ್ಮಾಣವಾಗಿದೆ. ಮಾತು ಕೇಳುವ ಸಹನೆಯನ್ನು ಯಾರೂ ತೋರುತ್ತಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕಲೆ, ಸಾಹಿತ್ಯ ಮತ್ತು ರಂಗಭೂಮಿಯನ್ನು ವಸ್ತುನಿಷ್ಠವಾಗಿ ಹಾಗೂ ಗಂಭೀರವಾಗಿ ವಿಮರ್ಶಿಸುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಜಾಫೆಟ್ ಅಭಿಪ್ರಾಯಪಟ್ಟರು.</p>.<p>ದೇಸಿ ರಂಗತಂಡ, ಭೂಮಿ ಕಲಾ ಅಧ್ಯಯನ ಕೇಂದ್ರ ಹಾಗೂ ಅನ್ವೇಷಣಾ ವೇದಿಕೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>‘ರಂಗಭೂಮಿ, ಸಾಹಿತ್ಯ ಹಾಗೂ ಕಲಾಕ್ಷೇತ್ರದ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರುವವರು ವಿಮರ್ಶೆ ಮಾಡುವಂತಾಗಬೇಕು. ಇವುಗಳ ವಿಮರ್ಶೆಗೆ ಪಠ್ಯ ನಿರೂಪಣೆ ಮಾಡುವ ಕೆಲಸಕ್ಕೆ ನಮ್ಮ ವಿಶ್ವವಿದ್ಯಾಲಯ ವೇದಿಕೆ ಆಗಲಿದೆ’ ಎಂದರು.</p>.<p>ರಂಗ ವಿಮರ್ಶಕ ಡಾ.ಎ.ಆರ್.ಗೋವಿಂದಸ್ವಾಮಿ, ‘ವಿಮರ್ಶೆ ಕೇವಲ ಕೃತಿಯ ನಿಯಂತ್ರಣ ಕೆಲಸವನ್ನಷ್ಟೇ ಮಾಡದೆ, ಅದಕ್ಕೆ ಪೂರಕವಾದ ಇನ್ನೊಂದು ಪ್ರತಿಕೃತಿ ರೂಪಿಸು<br /> ವಂತಾಗಬೇಕು. ಹೊಸ ಹೊಳಹುಗಳನ್ನು ನೀಡಬೇಕು. ಇಂತಹ ಕಲಾ ವಿಭಾಗಗಳಿಗೆ ಪ್ರತ್ಯೇಕ ವಿದ್ವಾಂಸರು, ವಿಮರ್ಶಕರು ಇಲ್ಲದ್ದು ಶೋಚನೀಯ. ವಿಮರ್ಶೆಯಿಂದಲೇ ಬದುಕು ಕಟ್ಟಿಕೊಳ್ಳುತ್ತೇನೆ ಎಂಬ ವಾತಾವರಣ ಸೃಷ್ಟಿಯಾಗಬೇಕು’ ಎಂದು ಹೇಳಿದರು.</p>.<p>ರಂಗವಿಮರ್ಶೆಯ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಜಿ.ಎನ್.ರಂಗನಾಥರಾವ್, ‘ಇಂದು ಸಾಂಸ್ಕೃತಿಕ ಬಿಕ್ಕಟ್ಟು ನಿರ್ಮಾಣವಾಗಿದೆ. ಮಾತು ಕೇಳುವ ಸಹನೆಯನ್ನು ಯಾರೂ ತೋರುತ್ತಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>