ಬೆಂಗಳೂರು: ಅಕ್ಷಯ ತೃತೀಯದ ಅಂಗವಾಗಿ ಜಯನಗರ 4ನೇ ಹಂತದ ಮೆಟ್ರೊ ನಿಲ್ದಾಣದ ಬಳಿಯ ಅಂಬಾ ಪರ್ಲ್ಸ್ ಆ್ಯಂಡ್ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ಶೇ 10 ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ.
ಚಿನ್ನ, ಬೆಳ್ಳಿಯ ಮೇಲೆ ವಿಶೇಷ ರಿಯಾಯಿತಿ ನೀಡಲಾಗಿದ್ದು, ಇದರ ಉಪಯೋಗವನ್ನು ಗ್ರಾಹಕರು ಪಡೆಯಬೇಕು. ಅಸಲಿ ಮುತ್ತುಗಳಿಗೆ ಜೀವಮಾನದ ಗ್ಯಾರಂಟಿ ನೀಡಲಾಗುತ್ತದೆ. ಯಾವ ಕಾಲದಲ್ಲಿಯೂ ಮುತ್ತುಗಳನ್ನು ಶೇ 50ರ ರಿಯಾಯಿತಿಯಲ್ಲಿ ವಿನಿಮಯ ಮಾಡಿಕೊಳ್ಳಬಹುದು ಎಂದು ಮಳಿಗೆಯ ಪ್ರಕಟಣೆ ತಿಳಿಸಿದೆ.