‘ಬೆಂಗಳೂರು ಹುಡುಗರು’ ತಂಡದ ವಿನೋದ್, ‘ವಸಂತನಗರ ವಾರ್ಡ್ನಲ್ಲಿ ನಾಲ್ವರು ಸ್ನೇಹಿತರು ಸೇರಿ ಆರಂಭಿಸಿದ ಈ ಅಭಿಯಾನ ನಗರದಾದ್ಯಂತ ವ್ಯಾಪಿಸಿದೆ. ಮರಗಳಿಗೆ ಹಾನಿ ಉಂಟುಮಾಡಿರುವವರ ವಿರುದ್ಧ ಸುಮಾರು 12 ಎಫ್ಐಆರ್ಗಳನ್ನು ದಾಖಲಿಸಿದ್ದೇವೆ. ಕರ್ನಾಟಕ ಸಿವಿಲ್ ಡಿಫೆನ್ಸ್, ದೆಹಲಿ ಕೇಂದ್ರ ಸಂಸ್ಥೆಯ ಹಿಂದೂಸ್ತಾನಿ ಸ್ಕೌಟ್ಸ್ ಮತ್ತು ಗೈಡ್ಸ್ನ ನಗರದ ಪ್ರತಿನಿಧಿಗಳು, ವೀಲ್ ಚೇರ್ ಅಸೋಸಿಯೇಷನ್, ಪರಿವರ್ತನ ಟ್ರಸ್ಟ್, ಸಿಟಿಜನ್ ಟಾಸ್ಕ್ ಫೋರ್ಸ್ ಸೇರಿ ಅನೇಕ ಸಂಘ ಸಂಸ್ಥೆಗಳು ಕೈಜೋಡಿಸಿವೆ’ ಎಂದರು.