ರಾಜ್ಯದಲ್ಲಿನ 223 ಬರಪೀಡಿತ ತಾಲ್ಲೂಕುಗಳ ಪೈಕಿ ಆಯ್ದ ತಾಲ್ಲೂಕುಗಳ 93 ಕೆರೆಗಳ ಹೂಳು ತೆಗೆಯುವುದು, ಅಚ್ಚುಕಟ್ಟು ಪ್ರದೇಶದ ಸುಧಾರಣೆ, ಏರಿ ಬಲವರ್ಧನೆ ಮತ್ತಿತರ ಕಾಮಗಾರಿಗಳನ್ನು ಕೈಗೊಂಡು, ಮಳೆ ನೀರನ್ನು ಸಂಗ್ರಹಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲು ಕಂದಾಯ ಇಲಾಖೆಯು ಸಣ್ಣ ನೀರಾವರಿ ಇಲಾಖೆಗೆ ಅನುದಾನ ಬಿಡುಗಡೆ ಆದೇಶದಲ್ಲಿ ಸೂಚಿಸಿದೆ.