<p><strong>ಬೆಂಗಳೂರು: </strong>ದೇಶದಲ್ಲಿ ಅತಿ ಹೆಚ್ಚು ಕಬ್ಬಿಣದ ಅದಿರು ಇರುವ ಕರ್ನಾಟಕದಲ್ಲಿ ಎರಕದ ಉದ್ಯಮ ಉತ್ತೇಜಿಸಲು ದಾಬಸ್ಪೇಟೆಯಲ್ಲಿ `ಫೌಂಡ್ರಿ ಕ್ಲಸ್ಟರ್~ ಅನ್ನು ಮುಂದಿನ ಆರು ತಿಂಗಳಲ್ಲಿ ಸ್ಥಾಪಿಸಲಾಗುತ್ತಿದೆ.<br /> <br /> ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ 60ನೇ ಇಂಡಿಯನ್ ಫೌಂಡ್ರಿ ಕಾಂಗ್ರೆಸ್ ಉದ್ಘಾಟಿಸಿದ ರಾಜ್ಯ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ಅವರು ಈ ವಿಷಯ ತಿಳಿಸಿದರು.<br /> <br /> ಉದ್ದೆೀಶಿತ `ಫೌಂಡ್ರಿ ಪಾರ್ಕ್~ನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ, ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದು ಈಗಾಗಲೇ ಚಾಲನೆಯಲ್ಲಿ ಇರುವ ಬೆಳಗಾವಿಯ ನಂತರದ ಎರಡನೇಯ ಕೈಗಾರಿಕಾ ವಸಾಹತು ಎನಿಸಿಕೊಳ್ಳಲಿದೆ. <br /> <br /> ಉದ್ಯಮದ ಉತ್ತೇಜನಕ್ಕೆ ನೀಡಲಾಗಿರುವ ಹಲವಾರು ಯೋಜನೆಗಳ ಪ್ರಯೋಜನವನ್ನು ಫೌಂಡ್ರಿ ಉದ್ಯಮ ಪಡೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರದ ಕಿರು, ಸಣ್ಣ ಹಾಗೂ ಮಧ್ಯಮ ಉದ್ದಿಮೆ ಕಾರ್ಯದರ್ಶಿ ಆರ್.ಕೆ.ಮಾಥುರ್ ಸಲಹೆ ನೀಡಿದರು. ಐಐಎಫ್ ಅಧ್ಯಕ್ಷ ಡಾ.ಎಚ್.ಸುಂದರ ಮೂರ್ತಿ ಮತ್ತಿತರರು ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ದೇಶದಲ್ಲಿ ಅತಿ ಹೆಚ್ಚು ಕಬ್ಬಿಣದ ಅದಿರು ಇರುವ ಕರ್ನಾಟಕದಲ್ಲಿ ಎರಕದ ಉದ್ಯಮ ಉತ್ತೇಜಿಸಲು ದಾಬಸ್ಪೇಟೆಯಲ್ಲಿ `ಫೌಂಡ್ರಿ ಕ್ಲಸ್ಟರ್~ ಅನ್ನು ಮುಂದಿನ ಆರು ತಿಂಗಳಲ್ಲಿ ಸ್ಥಾಪಿಸಲಾಗುತ್ತಿದೆ.<br /> <br /> ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ 60ನೇ ಇಂಡಿಯನ್ ಫೌಂಡ್ರಿ ಕಾಂಗ್ರೆಸ್ ಉದ್ಘಾಟಿಸಿದ ರಾಜ್ಯ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ಅವರು ಈ ವಿಷಯ ತಿಳಿಸಿದರು.<br /> <br /> ಉದ್ದೆೀಶಿತ `ಫೌಂಡ್ರಿ ಪಾರ್ಕ್~ನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ, ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದು ಈಗಾಗಲೇ ಚಾಲನೆಯಲ್ಲಿ ಇರುವ ಬೆಳಗಾವಿಯ ನಂತರದ ಎರಡನೇಯ ಕೈಗಾರಿಕಾ ವಸಾಹತು ಎನಿಸಿಕೊಳ್ಳಲಿದೆ. <br /> <br /> ಉದ್ಯಮದ ಉತ್ತೇಜನಕ್ಕೆ ನೀಡಲಾಗಿರುವ ಹಲವಾರು ಯೋಜನೆಗಳ ಪ್ರಯೋಜನವನ್ನು ಫೌಂಡ್ರಿ ಉದ್ಯಮ ಪಡೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರದ ಕಿರು, ಸಣ್ಣ ಹಾಗೂ ಮಧ್ಯಮ ಉದ್ದಿಮೆ ಕಾರ್ಯದರ್ಶಿ ಆರ್.ಕೆ.ಮಾಥುರ್ ಸಲಹೆ ನೀಡಿದರು. ಐಐಎಫ್ ಅಧ್ಯಕ್ಷ ಡಾ.ಎಚ್.ಸುಂದರ ಮೂರ್ತಿ ಮತ್ತಿತರರು ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>