‘ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಬರುತ್ತಿದ್ದ ಕಂಟೇನರ್ ವಾಹನವನ್ನು ಗೋರಗುಂಟೆಪಾಳ್ಯ ಬಳಿ ತಡೆದು ತಪಾಸಣೆ ನಡೆಸಲಾಯಿತು. ಕಂಟೇನರ್ನಲ್ಲಿ ಗೋವುಗಳು ಇರುವುದನ್ನು ಕಂಡು ದಾಖಲೆಗಳನ್ನು ಕೇಳಿದ್ದೆವು. ದಾಖಲೆ ತೋರಿಸುವ ನೆಪದಲ್ಲಿ ವಾಹನದಿಂದ ಇಳಿದಿದ್ದ ಚಾಲಕ, ಸ್ಥಳದಿಂದ ಓಡಿ ಹೋಗಿದ್ದಾನೆ’ ಎಂದು ಪೊಲೀಸರು ತಿಳಿಸಿದರು.