ಕೃಷಿ ದಂಪತಿಯ ಪುತ್ರಿ ಸುರಭಿ ಬೇನ್ಗೆ ಚಿಕ್ಕವಳಿರುವಾಗಲೇ ಮುಖದ ಸುತ್ತ ಚಿಕ್ಕದಾಗಿ ಗಡ್ಡೆ ಕಾಣಿಸಿಕೊಂಡಿತ್ತು. ಬಳಿಕ ಅದು ದೊಡ್ಡದಾಗಿ ಕುತ್ತಿಗೆಯನ್ನು ಆವರಿ ಸಿಕೊಂಡಿತು. ಇದರಿಂದ ಆಕೆ ಶಾಲೆಯನ್ನು ತೊರೆಯಬೇಕಾಯಿತು. ಸರ್ಕಾರೇತರ ಸಂಸ್ಥೆಗಳು ಚಿಕಿತ್ಸೆಗೆ ₹ 70 ಲಕ್ಷ ವ್ಯವಸ್ಥೆ ಮಾಡಿದವು. 21 ಮಂದಿ ವೈದ್ಯರ ತಂಡವು ಶಸ್ತ್ರಚಿಕಿತ್ಸೆಯ ಮೂಲಕ ಗಡ್ಡೆಯನ್ನು ತೆಗೆ ದಿದ್ದು, ಬಾಲಕಿಯು ಈಗ ಪೂರ್ಣ ಪ್ರಮಾ ಣದಲ್ಲಿ ಚೇತರಿಸಿಕೊಂಡಿದ್ದಾಳೆ ಎಂದು ಆಸ್ಪತ್ರೆ ತಿಳಿಸಿದೆ.