ನಿದ್ರೆ ಮಂಪರಿನಲ್ಲಿ ಅಪಘಾತ
ಅಪಘಾತಗಳ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅಲೋಕ್ಕುಮಾರ್, ‘ದೂರದ ಪ್ರಯಾಣದ ಸಂದರ್ಭದಲ್ಲಿ ಚಾಲಕನ ನಿದ್ರೆ ಮಂಪರಿನಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಚಿತ್ರದುರ್ಗದ ಅಪಘಾತಕ್ಕೂ ಇದೇ ಕಾರಣ. ಜನರು ಜೀವ ಕಳೆದುಕೊಳ್ಳುತ್ತಿರುವುದನ್ನು ನೋಡಿದರೆ ದುಃಖವಾಗುತ್ತಿದೆ. ಸವಾರರು ಹಾಗೂ ಚಾಲಕರು, ಜಾಗೃತಿಯಿಂದ ವಾಹನಗಳನ್ನು ಚಲಾಯಿಸಬೇಕು. ಅವರ ನಿರ್ಲಕ್ಷ್ಯದಿಂದ ಇತರರ ಪ್ರಾಣಕ್ಕೂ ಸಂಚಕಾರ ಬರುತ್ತದೆ ಎಂಬುದನ್ನು ಮರೆಯಬಾರದು’ ಎಂದು ಹೇಳಿದರು.