<p><strong>ಬೆಂಗಳೂರು:</strong> ಖರೀದಿಸಿದ ಹೊಸ ಬೈಕ್ನಲ್ಲಿ ತಾಂತ್ರಿಕ ದೋಷವಿದ್ದ ಕಾರಣ ಗ್ರಾಹಕನಿಗೆ ಹಣವನ್ನು ಮರುಪಾವತಿ ಮಾಡುವಂತೆ ನಗರದ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ಅದನ್ನು ತಯಾರಿಸಿದ ಕಂಪೆನಿ ಹಾಗೂ ಮಾರಾಟ ಮಳಿಗೆಗೆ ನಿರ್ದೇಶನ ನೀಡಿದೆ.</p>.<p>ಮಹದೇವಪುರ ಕ್ಷೇತ್ರದ ನಾರಾಯಣಪುರ ನಿವಾಸಿ ಭೂಪತಿ ಬಿ. ಅವರು 2015ರ ಸೆಪ್ಟೆಂಬರ್ನಲ್ಲಿ ಇಂದಿರಾ ನಗರದ ಪನಚೆ ಎಂಟರ್ಪ್ರೈಸಸ್ ಮಳಿಗೆಯಿಂದ ಯಮಹ ಎಫ್ಜೆಡ್–5 ಬೈಕ್ ಖರೀದಿಸಿದ್ದರು. ಸಾಲ ಮಾಡಿ₹ 98,416 ಪಾವತಿಸಿದ್ದರು.</p>.<p>ಡಸ್ಟರ್ಸ್ ಟೋಟಲ್ ಸಲ್ಯೂಷನ್ಸ್ ಕಂಪೆನಿಯಲ್ಲಿ ಉಪ ವ್ಯವಸ್ಥಾಪಕರಾಗಿದ್ದ ಭೂಪತಿ ಅವರಿಗೆ ಹೊಸ ಬೈಕ್ ಖರೀದಿಸಿದ ಖುಷಿ ಹೆಚ್ಚಿನ ದಿನ ಉಳಿಯಲಿಲ್ಲ.</p>.<p>‘ಬೈಕ್ ಸವಾರಿ ಮಾಡುವಾಗ ಅದು ಎಡಭಾಗಕ್ಕೆ ಸೆಳೆಯುವಂತೆ ಭಾಸವಾಗುತ್ತಿತ್ತು. ಅದು ನೇರವಾಗಿ ಸಾಗುವಂತೆ ಮಾಡಲು ಹೆಚ್ಚು ಬಲಪ್ರಯೋಗ ಮಾಡಬೇಕಾಗುತ್ತಿತ್ತು. ಅದನ್ನು ಬಳಸಲು ಆರಂಭಿಸಿದ ಒಂದೇ ವಾರದಲ್ಲಿ ಬೆನ್ನುನೋವು ಹಾಗೂ ಕತ್ತು ನೋವು ಕಾಣಿಸಿಕೊಂಡಿತು’ ಎಂದು ಅವರು ತಿಳಿಸಿದರು.</p>.<p>‘ಆ ಬೈಕ್ನಿಂದ ನನಗೆ ಯಾವುದೇ ಪ್ರಯೋಜನ ಆಗಲಿಲ್ಲ. ಆಟೊ ಹಾಗೂ ಬಸ್ ಪ್ರಯಾಣಿಸಲು ಹಣ ವೆಚ್ಚ ಮಾಡಬೇಕಾಯಿತು. ಇದರ ಜೊತೆಗೆ ಬೈಕ್ ಖರೀದಿಗಾಗಿ ಮಾಡಿದ್ದ ಸಾಲವನ್ನೂ ಮರುಪಾವತಿ ಮಾಡಬೇಕಿತ್ತು. ಸರ್ವಿಸ್ ಮಾಡಿಸಿದ ಬಳಿಕವೂ ಸಮಸ್ಯೆ ಬಗೆಹರಿಯಲಿಲ್ಲ’ ಎಂದರು.</p>.<p>‘ಮೊದಲ ಸರ್ವೀಸ್ ಮಾಡಿಸಿದ ನಂತರ ಒಂದು ತಿಂಗಳು ಬಿಟ್ಟು ಬರುವಂತೆ ಅಲ್ಲಿನ ಸಿಬ್ಬಂದಿ ಸೂಚಿಸಿದರು. ಆ ಬಳಿಕವೂ ಸಮಸ್ಯೆ ಹಾಗೆಯೇ ಮುಂದುವರಿಯಿತು. ಎರಡನೇ ಸರ್ವಿಸ್ ಮಾಡಿಸುವಾಗ ದೋಷವನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು. ಆ ಬಳಿಕವೂ ಸಮಸ್ಯೆಗೆ ಪರಿಹಾರ ಸಿಗಲಿಲ್ಲ’</p>.<p>‘ಬೆನ್ನುನೋವಿನಿಂದಾಗಿ ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಸಾಕಷ್ಟು ಹಣ ವ್ಯಯಿಸಿದೆ. ಸಾಕಷ್ಟು ಅಲೆದಾಟ ನಡೆಸಿದ ಬಳಿಕ ನಾನು ಇಂಡಿಯ ಯಮಹ ಮೋಟರ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಹಾಗೂ ಅದನ್ನು ಮಾರಾಟ ಮಾಡಿದ ಮಳಿಗೆ ವಿರುದ್ಧ ವೇದಿಕೆಗೆ ದೂರು ನೀಡಿದೆ’ ಎಂದರು.</p>.<p>ವೇದಿಕೆಯ ಅಧ್ಯಕ್ಷ ಪಿ.ವಿ.ಸಿಂಗ್ರಿ ಅವರು ಪ್ರಕರಣದ ವಿಚಾರಣೆ ನಡೆಸಿದ್ದರು. ವಾಹನ ಸಮರ್ಪಕವಾಗಿದೆ ಎಂಬುದನ್ನು ಸಾಬೀತುಪಡಿಸುವಂತಹ ಪುರಾವೆ ಒದಗಿಸಲು ಕಂಪೆನಿ ಹಾಗೂ ಮಾರಾಟ ಮಳಿಗೆಯವರು ವಿಫಲರಾದರು.</p>.<p>ವಾರಂಟಿ ಅವಧಿಯಲ್ಲಿ ವಾಹನದಲ್ಲಿ ದೋಷ ಕಾಣಿಸಿಕೊಂಡರೆ ಅದನ್ನು ದುರಸ್ತಿಪಡಿಸಬೇಕು ಅಥವಾ ಅದರ ಬದಲು ಬೇರೆ ವಾಹನವನ್ನು ಒದಗಿಸಬೇಕು. ಇಲ್ಲವೇ ಪೂರ್ತಿ ಮೊತ್ತವನ್ನು ಮರುಪಾವತಿ ಮಾಡಬೇಕು.</p>.<p>ಕಂಪೆನಿಯು ವಾಹನ ದುರಸ್ತಿಪಡಿಸಿರಲಿಲ್ಲ. ಅದಕ್ಕೆ ಬದಲಾಗಿ ಬೇರೆ ಬೈಕನ್ನೂ ನೀಡಿರಲಿಲ್ಲ. ಹಾಗಾಗಿ ಬೈಕ್ನ ಹಣವನ್ನು ಮರುಪಾವತಿಸುವಂತೆ ಹಾಗೂ ವ್ಯಾಜ್ಯದ ವೆಚ್ಚವಾಗಿ ₹ 4,000ವನ್ನು ದೂರುದಾರರಿಗೆ ನೀಡುವಂತೆ ವೇದಿಕೆಯು ನಿರ್ದೇಶನ ನೀಡಿತು. ಈ ಹಣಕ್ಕೆ ಶೇ 9ರಷ್ಟು ಬಡ್ಡಿಯನ್ನೂ (2016ರ ಏಪ್ರಿಲ್ನಿಂದ) ಕಂಪೆನಿ ಹಾಗೂ ಮರಾಟ ಮಳಿಗೆಯವರು ಪಾವತಿಸಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಖರೀದಿಸಿದ ಹೊಸ ಬೈಕ್ನಲ್ಲಿ ತಾಂತ್ರಿಕ ದೋಷವಿದ್ದ ಕಾರಣ ಗ್ರಾಹಕನಿಗೆ ಹಣವನ್ನು ಮರುಪಾವತಿ ಮಾಡುವಂತೆ ನಗರದ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ಅದನ್ನು ತಯಾರಿಸಿದ ಕಂಪೆನಿ ಹಾಗೂ ಮಾರಾಟ ಮಳಿಗೆಗೆ ನಿರ್ದೇಶನ ನೀಡಿದೆ.</p>.<p>ಮಹದೇವಪುರ ಕ್ಷೇತ್ರದ ನಾರಾಯಣಪುರ ನಿವಾಸಿ ಭೂಪತಿ ಬಿ. ಅವರು 2015ರ ಸೆಪ್ಟೆಂಬರ್ನಲ್ಲಿ ಇಂದಿರಾ ನಗರದ ಪನಚೆ ಎಂಟರ್ಪ್ರೈಸಸ್ ಮಳಿಗೆಯಿಂದ ಯಮಹ ಎಫ್ಜೆಡ್–5 ಬೈಕ್ ಖರೀದಿಸಿದ್ದರು. ಸಾಲ ಮಾಡಿ₹ 98,416 ಪಾವತಿಸಿದ್ದರು.</p>.<p>ಡಸ್ಟರ್ಸ್ ಟೋಟಲ್ ಸಲ್ಯೂಷನ್ಸ್ ಕಂಪೆನಿಯಲ್ಲಿ ಉಪ ವ್ಯವಸ್ಥಾಪಕರಾಗಿದ್ದ ಭೂಪತಿ ಅವರಿಗೆ ಹೊಸ ಬೈಕ್ ಖರೀದಿಸಿದ ಖುಷಿ ಹೆಚ್ಚಿನ ದಿನ ಉಳಿಯಲಿಲ್ಲ.</p>.<p>‘ಬೈಕ್ ಸವಾರಿ ಮಾಡುವಾಗ ಅದು ಎಡಭಾಗಕ್ಕೆ ಸೆಳೆಯುವಂತೆ ಭಾಸವಾಗುತ್ತಿತ್ತು. ಅದು ನೇರವಾಗಿ ಸಾಗುವಂತೆ ಮಾಡಲು ಹೆಚ್ಚು ಬಲಪ್ರಯೋಗ ಮಾಡಬೇಕಾಗುತ್ತಿತ್ತು. ಅದನ್ನು ಬಳಸಲು ಆರಂಭಿಸಿದ ಒಂದೇ ವಾರದಲ್ಲಿ ಬೆನ್ನುನೋವು ಹಾಗೂ ಕತ್ತು ನೋವು ಕಾಣಿಸಿಕೊಂಡಿತು’ ಎಂದು ಅವರು ತಿಳಿಸಿದರು.</p>.<p>‘ಆ ಬೈಕ್ನಿಂದ ನನಗೆ ಯಾವುದೇ ಪ್ರಯೋಜನ ಆಗಲಿಲ್ಲ. ಆಟೊ ಹಾಗೂ ಬಸ್ ಪ್ರಯಾಣಿಸಲು ಹಣ ವೆಚ್ಚ ಮಾಡಬೇಕಾಯಿತು. ಇದರ ಜೊತೆಗೆ ಬೈಕ್ ಖರೀದಿಗಾಗಿ ಮಾಡಿದ್ದ ಸಾಲವನ್ನೂ ಮರುಪಾವತಿ ಮಾಡಬೇಕಿತ್ತು. ಸರ್ವಿಸ್ ಮಾಡಿಸಿದ ಬಳಿಕವೂ ಸಮಸ್ಯೆ ಬಗೆಹರಿಯಲಿಲ್ಲ’ ಎಂದರು.</p>.<p>‘ಮೊದಲ ಸರ್ವೀಸ್ ಮಾಡಿಸಿದ ನಂತರ ಒಂದು ತಿಂಗಳು ಬಿಟ್ಟು ಬರುವಂತೆ ಅಲ್ಲಿನ ಸಿಬ್ಬಂದಿ ಸೂಚಿಸಿದರು. ಆ ಬಳಿಕವೂ ಸಮಸ್ಯೆ ಹಾಗೆಯೇ ಮುಂದುವರಿಯಿತು. ಎರಡನೇ ಸರ್ವಿಸ್ ಮಾಡಿಸುವಾಗ ದೋಷವನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು. ಆ ಬಳಿಕವೂ ಸಮಸ್ಯೆಗೆ ಪರಿಹಾರ ಸಿಗಲಿಲ್ಲ’</p>.<p>‘ಬೆನ್ನುನೋವಿನಿಂದಾಗಿ ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಸಾಕಷ್ಟು ಹಣ ವ್ಯಯಿಸಿದೆ. ಸಾಕಷ್ಟು ಅಲೆದಾಟ ನಡೆಸಿದ ಬಳಿಕ ನಾನು ಇಂಡಿಯ ಯಮಹ ಮೋಟರ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಹಾಗೂ ಅದನ್ನು ಮಾರಾಟ ಮಾಡಿದ ಮಳಿಗೆ ವಿರುದ್ಧ ವೇದಿಕೆಗೆ ದೂರು ನೀಡಿದೆ’ ಎಂದರು.</p>.<p>ವೇದಿಕೆಯ ಅಧ್ಯಕ್ಷ ಪಿ.ವಿ.ಸಿಂಗ್ರಿ ಅವರು ಪ್ರಕರಣದ ವಿಚಾರಣೆ ನಡೆಸಿದ್ದರು. ವಾಹನ ಸಮರ್ಪಕವಾಗಿದೆ ಎಂಬುದನ್ನು ಸಾಬೀತುಪಡಿಸುವಂತಹ ಪುರಾವೆ ಒದಗಿಸಲು ಕಂಪೆನಿ ಹಾಗೂ ಮಾರಾಟ ಮಳಿಗೆಯವರು ವಿಫಲರಾದರು.</p>.<p>ವಾರಂಟಿ ಅವಧಿಯಲ್ಲಿ ವಾಹನದಲ್ಲಿ ದೋಷ ಕಾಣಿಸಿಕೊಂಡರೆ ಅದನ್ನು ದುರಸ್ತಿಪಡಿಸಬೇಕು ಅಥವಾ ಅದರ ಬದಲು ಬೇರೆ ವಾಹನವನ್ನು ಒದಗಿಸಬೇಕು. ಇಲ್ಲವೇ ಪೂರ್ತಿ ಮೊತ್ತವನ್ನು ಮರುಪಾವತಿ ಮಾಡಬೇಕು.</p>.<p>ಕಂಪೆನಿಯು ವಾಹನ ದುರಸ್ತಿಪಡಿಸಿರಲಿಲ್ಲ. ಅದಕ್ಕೆ ಬದಲಾಗಿ ಬೇರೆ ಬೈಕನ್ನೂ ನೀಡಿರಲಿಲ್ಲ. ಹಾಗಾಗಿ ಬೈಕ್ನ ಹಣವನ್ನು ಮರುಪಾವತಿಸುವಂತೆ ಹಾಗೂ ವ್ಯಾಜ್ಯದ ವೆಚ್ಚವಾಗಿ ₹ 4,000ವನ್ನು ದೂರುದಾರರಿಗೆ ನೀಡುವಂತೆ ವೇದಿಕೆಯು ನಿರ್ದೇಶನ ನೀಡಿತು. ಈ ಹಣಕ್ಕೆ ಶೇ 9ರಷ್ಟು ಬಡ್ಡಿಯನ್ನೂ (2016ರ ಏಪ್ರಿಲ್ನಿಂದ) ಕಂಪೆನಿ ಹಾಗೂ ಮರಾಟ ಮಳಿಗೆಯವರು ಪಾವತಿಸಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>